ಸಮಾಪನಗೊಂಡ ರಾಷ್ಟ್ರ ಸೇವಿಕಾ ಸಮಿತಿ ಪ್ರೇರಣಾ ಶಿಬಿರ
ನವದೆಹಲಿ : ರಾಷ್ಟ್ರ ಸೇವಿಕಾ ಸಮಿತಿ ನವದೆಹಲಿಯಲ್ಲಿ ನವೆಂಬರ್ 11 ರಿಂದ 13 ರ ವರೆಗೆ ಆಯೋಜಿಸಿದ್ದ 3 ದಿನಗಳ ಐತಿಹಾಸಿಕ ಅಖಿಲ ಭಾರತೀಯ ಕಾರ್ಯಕರ್ತ ಪ್ರೇರಣಾ ಶಿಬಿರ 2016 ನವೆಂಬರ್ 13 ರಂದು ಆಭೂತಪೂರ್ವ ಯಶಸ್ಸಿನೊಂದಿಗೆ ಸಮಾಪನಗೊಂಡಿತು.
ಪ್ಯಾರಾ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ದೀಪಾ ಮಲ್ಲಿಕ್, ಖ್ಯಾತ ವಿಜ್ಞಾನಿ ಡಾ. ವಿ. ಶುಭಾ, ರಾಷ್ಟ್ರ ಸೇವಿಕಾ ಸಮಿತಿ ಸಂಚಾಲಕಿ ವಿ. ಶಾಂತಕುಮಾರಿ, ಇತರ ಗಣ್ಯರು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಸ್ವಯಂಸೇವಕರು ದೈಹಿಕ ವ್ಯಾಯಾಮಗಳನ್ನು ಅತ್ಯದ್ಭುತ ರೀತಿಯಲ್ಲಿ ಪ್ರಸ್ತುತ ಪಡಿಸಿದರು.
ಗಂಗಾಜಲ ಸ್ತೋತ್ರವನ್ನು ಪಠಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ರಾಷ್ಟ್ರ ಸೇವಿಕಾ ಸಮಿತಿಯ ಪ್ರಚಾರ್ ಪ್ರಸಾರ್ ಪ್ರಮುಖ್ ಸುನಿಲ ಸೋಹವಾನಿ ಗಣ್ಯರಿಗೆ ಸ್ವಾಗತ ಕೋರಿ ಪರಿಚಯಿಸಿದರು.
ಶಿಬಿರದ ವರದಿಯನ್ನು ವಾಚಿಸಿದ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಮಾ. ಅಲಕಾ ಇನಾಂದಾರ್, ‘ಸ್ತ್ರೀ’ ಶಕ್ತಿ ಮತ್ತು ಸಾಮರ್ಥ್ಯದ ಮೂಲವಾಗಿದ್ದಾಳೆ. ಸಮಿತಿಯ ಸದಸ್ಯರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದು, ಸಾವಿರಾರು ಸೇವಾ ಕಾರ್ಯಗಳನ್ನು ಸಮಿತಿ ಕೈಗೊಂಡಿದೆ. ಪ್ರಕೃತಿ ವಿಕೋಪದ ಸಂದರ್ಭ ಸೇರಿದಂತೆ ಎಲ್ಲ ಅಗತ್ಯ ಸಂದರ್ಭಗಳಲ್ಲೂ ಸಮಿತಿ ಸದಸ್ಯರು ಅಗತ್ಯ ನೆರವು ನೀಡಲು ಧಾವಿಸುತ್ತಿದ್ದಾರೆ ಎಂದರು.
ಶಿಬಿರದ ಬಗ್ಗೆ ಮೆಚ್ಚುಗೆಯ ಮಾತನಾಡಿದ ದೀಪಾ ಮಲ್ಲಿಕ್ ಈ ಕಾರ್ಯಕ್ರಮಕ್ಕೆ ಸ್ಫೂರ್ತಿ ನೀಡುವ ಸಲುವಾಗಿ ನಾನು ಇಲ್ಲಿಗೆ ಬಂದಿದ್ದೆ. ಆದರೆ ಇಲ್ಲಿ ನಾನೇ ಸ್ಫೂರ್ತಿಯನ್ನು ಪಡೆದುಕೊಂಡಿದ್ದೇನೆ ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ಬೆಂಗಳೂರು ಎನ್ಎಎಲ್ನ ಡಾ. ವಿ. ಶುಭಾ ಅವರು, ಪ್ರಾಮಾಣಿಕತೆ, ವಿಧೇಯತೆ, ವಿನಮ್ರತೆ, ಕುಟುಂಬವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಈ ಎಲ್ಲಾ ಅಂಶಗಳು ಆಧಾರಸ್ತಂಭವಿದ್ದಂತೆ. ಹಿರಿಯರಿಗೆ ಹಾಗೂ ಹೆತ್ತವರಿಗೆ ನಾವು ವಿಧೇಯರಾಗಿರಬೇಕು ಎಂದರು.
ದೆಹಲಿ ಏರ್ಪೋರ್ಟ್ ಎನ್ಎಎಲ್ ವಿನ್ಯಾಸಗೊಳಿಸಿದ ಸಂಪೂರ್ಣ ಸ್ವದೇಶಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದೆ. ವಿದೇಶಗಳಿಗೆ ಹೋಲಿಸಿದರೆ ಇದಕ್ಕೆ ತಗಲುವ ವೆಚ್ಚವೂ ಕಡಿಮೆ. ಎನ್ಎಎಲ್ ವಿವಿಧ ಉತ್ಪನ್ನಗಳು ಮತ್ತು ಯಂತ್ರಗಳನ್ನು ತಯಾರಿಸಲು ಹೆಮ್ಮೆ ಪಡುತ್ತದೆ. 4 ವರ್ಷ ಕಠಿಣ ಸವಾಲುಗಳನ್ನು ಎದುರಿಸಿದರೂ ಮಾತೃಶಕ್ತಿಯಿಂದ ಅವುಗಳೆಲ್ಲವನ್ನೂ ಎದುರಿಸಿದೆ ಎಂದರು.
ಸಮಿತಿಯ ಪ್ರಮುಖ್ ಸಂಚಾಲಕಿ ವಿ. ಶಾಂತ ಮಾತನಾಡಿ, ಸಾಧಕರಾದ ದೀಪಾ ಮಲ್ಲಿಕ್, ಡಾ. ವಿ. ಶುಭಾ ನಮ್ಮ ದೇಶಕ್ಕೆ ಹೆಮ್ಮೆ. ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ಪ್ರೇರಣೆ ನೀಡಿದ್ದಾರೆ ಎಂದರು.
ಸಮಿತಿಯು ಯುವ ಜನಾಂಗಕ್ಕೆ ಸರಿಯದಾದ ಪಥದಲ್ಲಿ ಸಾಗಲು ದಾರಿ ತೋರಿಸುತ್ತಿದೆ. ತೇಜೋಮಯ ಭಾರತ (ವೈಬ್ರಂಟ್ ಇಂಡಿಯಾದ) ದ ಬಗ್ಗೆ ಸಮಿತಿಯ ನೂರಾರು ವಿಚಾರ ಸಂಕಿರಣಗಳನ್ನು ಆಯೋಜನೆ ಮಾಡಿದೆ. ದೇಶಭಕ್ತಿಯ ಸ್ಫೂರ್ತಿಯೊಂದಿಗೆ ಸಾವಿರಾರು ಯುವ ಮನಸ್ಸುಗಳು ದೇಶವನ್ನು ಪ್ರಗತಿಪಥದತ್ತ ಸಾಗಿಸುವಲ್ಲಿ ತಲ್ಲೀನರಾಗಿದ್ದಾರೆ. ಅವರೆಲ್ಲರಿಗೂ ಈ ಶಿಬಿರವು ಹೊಸದಾರಿ ದೀಪ ತೋರಿಸಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸುಮಾರು 2,100 ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.