ಕೋಝಿಕೋಡ್: ಜನರಿಂದ ಕೇವಲ ಸ್ವಿಸ್ ಬ್ಯಾಂಕ್ನಲ್ಲಿ ಮಾತ್ರವಲ್ಲದೇ ಕೇರಳದ ಸಹಕಾರಿ ಬ್ಯಾಂಕ್ಗಳಲ್ಲೂ ಕಪ್ಪು ಹಣ ಹೂಡಿಕೆ ಮಾಡಲಾಗಿದೆ.
ಸಹಕಾರಿ ಬ್ಯಾಂಕ್ಗಳ ಖಾತೆಗಳಲ್ಲಿ ಸುಮಾರು 30,000 ಕೋಟಿ ರೂ. ಕಪ್ಪು ಹಣ ಇರುವ ಬಗ್ಗೆ ತೆರಿಗೆ ಇಲಾಖೆ ಬಹಿರಂಗಪಡಿಸಿದೆ.
ಸಹಕಾರಿ ಬ್ಯಾಂಕ್ಗಳು ಇಲಾಖೆಗೆ ಖಾತೆದಾರರ ವಿವರಗಳನ್ನು ನೀಡಲು ನಿರಾಕರಿಸಿವೆ ಎಂದು ಇಲಾಖೆ ಆರೋಪಿಸಿದೆ. ಕೋಝಿಕೋಡ್ ವಲಯದ ಬ್ಯಾಂಕ್ಗಳಿಂದ ಈ ವರ್ಷ ಸುಮಾರು 150 ಕೋಟಿ ರೂ. ಕಪ್ಪು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ.
ಸಹಕಾರಿ ಬ್ಯಾಂಕ್ ವಲಯವನ್ನು ಹೆಚ್ಚಾಗಿ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಅಥವಾ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷದ ಚುನಾಯಿತ ಪ್ರತಿನಿಧಿಗಳಿಂದ ನಿಯಂತ್ರಿಸಲ್ಪಡುತ್ತಿದೆ ಎನ್ನಲಾಗಿದ್ದು, ಈ ಬ್ಯಾಂಕ್ಗಳಲ್ಲಿ ಠೇವಣಿ ಹೊಂದಿರುವ ಖಾತೆದಾರರಲ್ಲಿ ಹೆಚ್ಚಾಗಿ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಮಾಫಿಯಾಗಳು, ಹವಾಲಾ ವಿತರಕರು ಮತ್ತು ಭಯೋತ್ಪಾದಕರು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಖಾತೆದಾರರು ತಮ್ಮ ಮೂಲ ಆದಾಯ ಘೋಷಿಸದಿದ್ದಲ್ಲಿ ಮತ್ತು ತೆರಿಗೆ ಪಾವತಿಸದಿದ್ದಲ್ಲಿ ಅಂತಹ ಖಾತೆಗಳ ಹಣವನ್ನು ವಶಪಡಿಸಿಕೊಳ್ಳಲಾಗುವುದು. ಅಂತಹ ಖಾತೆದಾರರ ವಿರುದ್ಧ ಆರ್ಥಿಕ ಅಪರಾಧಗಳ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಆದಾಯ ತೆರಿಗೆ ಆಯುಕ್ತ ಪಿ.ಎನ್. ದೇವದಾಸನ್ ಹೇಳಿದ್ದಾರೆ.
ಮಲಬಾರ್ನಲ್ಲಿ ಮೂಲ ಆದಾಯದ ವಿವರಣೆ ಬಹಿರಂಗಪಡಿಸದ 11,000 ಖಾತೆದಾರರ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿದ್ದು, ಈವರೆಗೆ 29.62 ಕೋಟಿ ರೂ. ತೆರಿಗೆ ಪಡೆಯಲಾಗಿದೆ. ನೋಟಿಸ್ಗೆ ಪ್ರತಿಕ್ರಿಯೆ ನೀಡದ 4,000 ಖಾತೆದಾರರ ಮೇಲೆ ನಿಗಾ ವಹಿಸಲಾಗಿದೆ ಎಂದು ದೇವದಾಸನ್ ತಿಳಿಸಿದ್ದಾರೆ.
ಸಹಕಾರಿ ಬ್ಯಾಂಕ್ಗಳಲ್ಲಿ ಠೇವಣಿಯಾಗಿರುವ ಕಪ್ಪು ಹಣದ ವಿರುದ್ಧ ಕೇಂದ್ರ ಕ್ರಮ ಕೈಗೊಳ್ಳಬೇಕು ಎಂದು ಕೇರಳದ ಬಿಜೆಪಿ ಪಕ್ಷ ಒತ್ತಾಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.