ಗುರುಗ್ರಾಮ: ದೆಹಲಿ, ಎನ್ಸಿಆರ್ ಮತ್ತು ಹರಿಯಾಣದಲ್ಲಿ ದೀಪಾವಳಿ ಆಚರಣೆಯ ನಂತರ ಮತ್ತು ವಾಹನಗಳ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಸುಮಾರು 1,400 ವಿದ್ಯಾರ್ಥಿಗಳು ಕೂಡಲೇ ನ್ಯಾಷನಲ್ ಕ್ಲೀನ್ ಏರ್ ಡೇ ಜಾರಿಗೆ ತರುವ ಪ್ರಧಾನಿ ಮೋದಿ ಅವರಿಗೆ ಪತ್ರ ಮೂಲಕ ಒತ್ತಾಯಿಸಿದ್ದಾರೆ.
ಹೆಚ್ಚು ಮರಗಳನ್ನು ನೆಡುವುದು, ದೀಪಾವಳಿ ಸಂದರ್ಭ ಪಟಾಕಿ ನಿಷೇಧ ಮಾಡುವುದು, ಸಸ್ಯಗಳ ಪಳೆಯುಳಿಕೆ ಸುಡುವುದು, ದೆಹಲಿಯಲ್ಲಿ ಸಮ-ಬೆಸ ಯೋಜನೆ ಜಾರಿಗೆ ತರುವುದು, ಹೆಚ್ಚಿನ ಪ್ರಮಾಣದಲ್ಲಿ ಸೈಕಲ್ ಬಳಕೆಗೆ ಪ್ರೋತ್ಸಾಹಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಈ ರೀತಿಯ ಮಾಲಿನ್ಯದಿಂದ ಕೂಡಿದ ಪ್ರದೇಶದಲ್ಲಿ ಜನರಿಗರ ವಾಸಿಸಲು ತೊಂದರೆಯಾಗುತ್ತ್ತಿದೆ. ಜನರನ್ನು ರಕ್ಷಿಸಲು ಪ್ರತಿವರ್ಷ ಮಾಲಿನ್ಯ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ೧೦ನೇ ತರಗತಿಯ ವಿದ್ಯಾರ್ಥಿನಿ ಪರ್ಲ್ ಹೇಳಿದ್ದಾಳೆ.
ಆಶ್ರೇಯಾ ಸಿಂಗ್ ಎಂಬ ಹುಡುಗಿ ಮಾಲಿನ್ಯದಿಂದಾಗಿ ತಾನು ಅಸ್ತಮಾ ಮತ್ತು ಉಸಿರಾಟದ ತೊಂದರಯಿಂದ ಬಳಲುತ್ತಿದ್ದು, ಜನರಲ್ಲಿ ಜಗೃತಿ ಮೂಡಿಸಲು ನ್ಯಾಷನಲ್ ಕ್ಲೀನ್ ಏರ್ ಡೇ ಅವಶ್ಯವಾಗಿದೆ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ.
UNICEF ಪ್ರಕಾರ ಪ್ರತಿ ವರ್ಷ 5ವರ್ಷದೊಳಗಿನ 6 ಲಕ್ಷ ಮಕ್ಕಳು ಮಾಲಿನ್ಯ ಸಂಬಂಧಿತ ರೋಗಗಳಿಂದ ಸಾಯುತ್ತಿದ್ದಾರೆ ಎಂದು ಡಿಪಿಎಸ್ ನ ಪ್ರಿನ್ಸಿಪಾಲರಾದ ಸುಶಾಂತ ಲೋಕ್ ಸುನಿತಾ ನಾಗಪಾಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.