ನವದೆಹಲಿ: ಕೇಂದ್ರ ಸರ್ಕಾರ ಕಪ್ಪುಹಣ ಮತ್ತು ತೆರಿಗೆರಹಿತ ಹಣವನ್ನು ತಡೆಗಟ್ಟಲು ಮಂಗಳವಾರ ರೂ.500 ಮತ್ತು ರೂ.1000 ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ದೇಶದಾದ್ಯಂತ ಲಕ್ಷಾಂತರ ಜನರು ರೂ. 500 ಮತ್ತು ರೂ.1000 ನೋಟುಗಳ ಠೇವಣಿ ಮತ್ತು ಬದಲಾವಣೆಗೆ ಬ್ಯಾಂಕುಗಳಲ್ಲಿ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ.
ಕೇಂದ್ರ ಸರ್ಕಾರ ಭ್ರಷ್ಟಾಚಾರ ಮುಕ್ತ ಭಾರತದ ರಚನೆಯ ಪ್ರಯತ್ನಗಳಿಗೆ ಬದ್ಧವಾಗಿದೆ. ಭಾರತದ ಅಭಿವೃದ್ಧಿಯ ಹೊಂದುತ್ತಿದ್ದು, ಇದರ ಫಲ ಪ್ರತಿಯೊಬ್ಬ ನಾಗರಿಕನೂ ಪಡೆಯಲಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಜನರು ಬ್ಯಾಂಕ್ಗಳಲ್ಲಿ ನೋಟು ಬದಲಾವಣೆಗೆ ತಾಸುಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಿದ್ದು, ಯಾವುದೇ ಬ್ಯಾಂಕುಗಳಲ್ಲಿ ಇತರ ಬ್ಯಾಂಕ್ಗಳ ಎಟಿಎಂ ಬಳಕೆ ಮೇಲಿನ ಶುಲ್ಕ ಮನ್ನಾ ಮಾಡಲಾಗಿದೆ. ದೇಶದಲ್ಲಿರುವ ಎಲ್ಲಾ ಬ್ಯಾಂಕ್, ಎಟಿಎಂಗಳಲ್ಲಿ ಸಾವಿರಾರು ಮಂದಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಜನರ ಖಾತೆಯಲ್ಲಿ ತಮ್ಮ ಆದಾಯಕ್ಕಿಂತ ಹೆಚ್ಚಿನ ಹಣ ಕಂಡುಬಂದಲ್ಲಿ ಮತ್ತು 2.5 ಲಕ್ಷಕ್ಕಿಂತ ಅಧಿಕ ಮೊತ್ತ ಠೇವಣಿ ಮಾಡಿದಲ್ಲಿ ಶೇ.200ರಷ್ಟು ದಂಡ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಬ್ಯಾಂಕ್ಗಳು ವಾರಾಂತ್ಯದಲ್ಲೂ ಕಾರ್ಯ ನಿರ್ವಹಿಸಲಿದ್ದು, ಹೆಚ್ಚಿನ ಸಮಯ ಅಂದರೆ ಸಂಜೆ ಸುಮಾರು 8 ಗಂಟೆ ವರೆಗೆ ಕಾರ್ಯ ನಿರ್ವಹಿಸಲಿವೆ. ಜನರು ಆತಂಕಗೊಂಡು ಆರಂಭಿಕ ದಿನಗಳಲ್ಲೇ ಬ್ಯಾಂಕ್ಗಳಿಗೆ ದೌಡಾಯಿಸುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಬ್ಯಾಂಕ್ ಎಟಿಎಂಗಳಲ್ಲಿ ರೂ.500 ಮತ್ತು ರೂ.2000 ಮುಖಬೆಲೆಯ ಹೊಸ ನೋಟುಗಳು ನ.11ರಿಂದ ದೊರೆಯಲು ಪ್ರಾರಂಭವಾಗಿವೆ. ಶುಕ್ರವಾರ ಮಧ್ಯರಾತ್ರಿವರೆಗೆ ಪೆಟ್ರೋಲ್ ಬಂಕ್, ಸರ್ಕಾರಿ ಆಸ್ಪತ್ರೆ, ಮೆಟ್ರೋಗಳು ಮತ್ತು ನೀರಿನ ಬಿಲ್, ವಿದ್ಯುತ್ ಬಿಲ್ಗಾಗಿ ಸ್ವೀಕರಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಗಳು ನ.11ರ ವರೆಗೆ ಸುಂಕರಹಿತ ಇರಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.