ನವದೆಹಲಿ: ಪ್ರಧಾನಿ ಮೋದಿ ಹೊರಡಿಸಿದ ರೂ.500 ಮತ್ತು 1000 ನೋಟುಗಳ ಬದಲಾವಣೆಯ ವಿಚಾರದಿಂದ ಜನರು ತಮ್ಮ ಹಣದ ಠೇವಣಿಗೆ ಬ್ಯಾಂಕುಗಳಿಗೆ ತೆರಳುತ್ತಿದ್ದಾರೆ. ಇದೀಗ ಸರ್ಕಾರ 10 ಲಕ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಣ ಠೇವಣಿ ಮೇಲ್ವಿಚಾರಣೆ ನಡೆಸಲಿದೆ. ತೆರಿಗೆರಹಿತ ಠೇವಣಿ ಮೇಲೆ ಶೇ.200 ತಲೆದಂಡ ಬೀಳಲಿದೆ ಎಂದು ಹಣಕಾಸು ಸಚಿವ ಅರುಣ ಜೇಟ್ಲಿ ಹೇಳಿದ್ದಾರೆ.
ಜನರ ಹಿತದೃಷ್ಟಿಯಿಂದ ಸರ್ಕಾರವು ಗೃಹಿಣಿಯರು, ಸಣ್ಣ ಉದ್ಯಮಿಗಳು ಮತ್ತು ವ್ಯಾಪಾರಸ್ಥರು, ಕಾರ್ಮಿಕರು ಯಾವುದೇ ತೊಂದರೆಯಿಲ್ಲದೆ 1.5-2 ಲಕ್ಷದವರೆಗೆ ತಮ್ಮ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಚಿನ್ನದ ವ್ಯಾಪಾರಿಗಳು ಆಭರಣ ಮಾರಾಟದ ವೇಳೆ ಗ್ರಾಹಕರಿಂದ ಹಣ ಪಡೆಯುವಾಗ ಕಡ್ಡಾಯವಾಗಿ ಅವರ ಪ್ಯಾನ್ ಕಾರ್ಡ್ ಪಡೆಯಲೇಬೇಕು. ಇಲ್ಲದಿದ್ದಲ್ಲಿ ಚಿನ್ನದ ವ್ಯಾಪರಿಗಳ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದ್ದಾರೆ.
10 ಲಕ್ಷ ರೂ. ಠೇವಣಿ ಮಾಡಿರುವವರು ಆ ಹಣಕ್ಕೆ ತೆರಿಗೆ ನೀಡಿದ್ದಲ್ಲಿ ಆ ಹಣಕ್ಕೆ ಯಾವುದೇ ನಷ್ಟವಿಲ್ಲ, ಆದಾಯ ತೆರಿಗೆ ಸೆಕ್ಷನ್ 270(ಎ) ಪ್ರಕಾರ ಅವರ ಹಣ ತೆರಿಗೆಯ ಖಾತೆಗೆ ಜಮಾ ಆಗದಿದ್ದಲ್ಲಿ ಆ ಹಣಕ್ಕೆ ತೆರಿಗೆ ಬೀಳುವುದು ಎಂದು ಅಧಿಯಾ ತಿಳಿಸಿದ್ದಾರೆ.
ಸರ್ಕಾರವು ನವೆಂಬರ್ 10ರಿಂದ ಡಿಸೆಂಬರ 30ರವರೆಗೆ ಬ್ಯಾಂಕ್ನಿಂದ ವರದಿ ಪಡೆಯಲಿದ್ದು, ಆ ಪ್ರಕಾರ ಯಾರ ಖಾತೆಯಲ್ಲಿ 2.5 ಲಕ್ಷಕ್ಕಿಂತ ಹೆಚ್ಚು ಹಣ ಜಮಾ ಮಾಡಿದವರ ಮೇಲೆ ಶೇ.45ರಷ್ಟು ತೆರಿಗೆ ಮತ್ತು ಶೇ.30ರಷ್ಟು ದಂಡ ಹಾಕಲಾಗುವುದು ಎಂದು ತಿಳಿಸಿದೆ. ತೆರಿಗೆ ಹಾಕಲಾಗುವುದು ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.