ಮುಂಬಯಿ: ಆಧಾರ್ನ್ನು ದೇಶವ್ಯಾಪಿಗೊಳಿಸಲು, ಭಾರತದ ವಿಶಿಷ್ಠ ಗುರುತು ಪ್ರಾಧಿಕಾರ (ಯುಐಡಿಎಐ) ಹಿರಿಯ ನಾಗರಿಕರು ಮತ್ಯು ದಿವ್ಯಾಂಗರಿಗಾಗಿ ಮನೆ ಬಾಗಿಲಿಗೆ ಸೇವೆ ಒದಗಿಸಲು ಯೋಜಿಸುತ್ತಿದೆ. ಆಧಾರ್ ನೋದಣಿ ಕೇಂದ್ರಗಳಿಗೆ ಹೋಗಿ ನೋಂದಣಿ ಮಾಡಿಸಲು ಸಾಧ್ಯವಾಗದ ಹಿರಿಯ ನಾಗರಿಕರು, ದಿವ್ಯಾಂಗರಿಗೆ ಈ ಅನನ್ಯ ಗುರುತಿನ ಚೀಟಿ ಯೋಜನೆ ಸಹಾಯಕವಾಗಲಿದೆ.
ಮಹಾರಾಷ್ಟ್ರದ ಶೇ.91ರಷ್ಟು ಭಾಗಗಳಲ್ಲಿ ಈ ಯೋಜನೆಯಡಿ ನೋಂದಣಿ ಕಾರ್ಯ ನಿರ್ವಹಿಸಲಾಗಿದೆ ಎಂದು ಉಐಡಿಎಐ ಅಧಿಕಾರಿ ತಿಳಿಸಿದ್ದಾರೆ.
ಒನ್-ಟು-ಒನ್ ಆಧಾರದಲ್ಲಿ ಹಿರಿಯ ನಾಗರಿಕರು, ದಿವ್ಯಾಂಗರು, ದುರ್ಬಲರನ್ನು ಗುರಿಯಾಗಿಸಿ ಈ ಯೋಜೆನೆ ರೂಪಿಸಲಾಗುದ್ದು, ನೋಂದಣಿ ಸಂಸ್ಥೆಗಳು ಮನೆ ಬಾಗಿಲಿಗೆ ಸೇವೆ ಒದಗಿಸುವಂತೆ ಕೋರಲಾಗಿದೆ. ರಾಜ್ಯ ಸರ್ಕಾರಗಳು ಸಹ ಈ ಬಗ್ಗೆ ಹಮನಹರಿಸುವಂತೆ ಹೇಳಲಾಗಿದ್ದು, ಜನರು ಅಧಿಕಾರಿಗಳನ್ನು ಸಂಪರ್ಕಿಸಲು ಸಹಾಯವಾಣಿ ಸ್ಥಾಪಿಸುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ನಿರ್ದೇಶಮನಾಲಯ ಈಗಾಗಲೇ 3,929 ನೋಂದಣಿ ಕಿಟ್ ಸಂಗ್ರಹಿಸಿ ಅಂಗನವಾಡಿ ಮತ್ತು ಶಾಲೆಗಳ ಮಕ್ಕಳ ನೋಂದಣಿಗೆ 4,400 ಟ್ಯಾಬ್ಲೆಟ್ಗಳನ್ನು ನಿಯೋಜಿಸಲು ಯೋಜಿಸಿದೆ. ಅದು ರಾಜ್ಯದಲ್ಲಿ ೪,೦೦೦ ಶಾಶ್ವತ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.