ಮುಂಬಯಿ: ಹಾಸ್ಯ ನಟ ಕಪಿಲ್ ಶರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ‘ಅಚ್ಛೇ ದಿನ್’ ವಿರುದ್ಧ ಕಟುವಾಗಿ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಅವರು ಕಳೆದ 5 ವರ್ಷದಲ್ಲಿ ಸುಮಾರು 15 ಕೋಟಿ ರೂ. ಆದಾಯ ತೆರಿಗೆ ಪಾವತಿಸುವುದರ ಜೊತೆಗೆ ಬಿಎಂಸಿಗೆ 5 ಲಕ್ಷ ರೂ. ಲಂಚ ಪಾವತಿಸಬೇಕು, ಇದೇನಾ ನಿಮ್ಮ ಅಚ್ಛೇ ದಿನ್ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಕಪಿಲ್ ಶರ್ಮಾ ಅವರು ತಮ್ಮ ಯಾವುದೇ ಕೆಲಸಕ್ಕಾಗಿ ಮುಂಬೈ ಮಹಾನಗರ ಪಾಲಿಕೆ ಕಚೇರಿಗೆ ಹೋಗಿದ್ದಾಗ, ಅಲ್ಲಿಯ ಅಧಿಕಾರಿ ಅವರ ಕೆಲಸ ಮಾಡಿಕೊಡಲು ಸುಮಾರು 5 ಲಕ್ಷ ರೂ. ಲಂಚ ಕೇಳಿದ್ದಾರೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದದ್ದ ಕಪಿಲ್ ಶರ್ಮಾ ಇದೇನಾ ಅಚ್ಚೇ ದಿನ್ ಎಂದು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ಇದೀಗ ಕಪಿಲ್ ಶರ್ಮಾ ಅವರ ಟ್ವೀಟ್ಗಳು ಬಹಳಷ್ಟು ರೀಟ್ವೀಟ್ಗಳಾಗಿ ವ್ಯಾಪಕ ಚರ್ಚೆ ಪ್ರಾರಂಭವಾಗಿದೆ.
ಇದೇ ವೇಳೆ ಕಪಿಲ್ ಶರ್ಮಾರ ಟ್ವೀಟ್ಗಳಿಗೆ ಪ್ರತಿಕ್ರಿಯಿಸಿದ ಬಿಎಂಸಿ ಮುಖ್ಯಸ್ಥ ಮನೋಹರ್ ಪವಾರ್, ಲಂಚ ಕೇಳಿದ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿ. ವಿಚಾರಣೆಗೆ ಆದೇಶಿಸಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
2014ರ ಚುನಾವಣೆ ಸಂದರ್ಭ ಬಿಜೆಪಿಯು ಭವಿಷ್ಯದಲ್ಲಿ ‘ಅಚ್ಛೇ ದಿನ್’ ಬರಲಿವೆ ಎಂದು ಘೋಷಿಸಿದ್ದು, ಇತ್ತೀಚಿನ ದಿನಗಳಲ್ಲಿ ಮೋದಿ ಸರ್ಕಾರದ ವಿರುದ್ಧ ಈ ಪದವನ್ನು ವಿಮರ್ಶಾತ್ಮಕವಾಗಿ ಬಳಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.