ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ಮತ್ತು ತ್ಯಾಜ್ಯ ವಿಲೇವಾರಿ ನಿಭಾಯಿಸಲು ಮುಂದಿನ ಒಂದು ವರ್ಷಗಳ ಕ್ಯಾಲೆಂಡರ್ ಪಟ್ಟಿಯನ್ನು ಮಾಹಿತಿ ಬ್ಯೂರೋ ತಯಾರಿಸಿದೆ.
ಸಚಿವಾಲಯಗಳು ಸಕಾಲದಲ್ಲಿ ತ್ಯಾಜ್ಯ ತೆರವುಗೊಳಿಸುವ ಸ್ವಚ್ಛತಾ ಅಭಿಯಾನ ನಡೆಸಿದರೂ, ಇದನ್ನು ನಿರಂತರವಾಗಿ ಮುಂದುವರೆಸಲು ಹಾಗೂ ತ್ರೈಮಾಸಿಕವಾಗಿ ಪರಿಶೀಲಿಸಲು ಮಾಹಿತಿ ಬ್ಯೂರೋ ಕ್ಯಾಲೆಂಡರ್ ತಯಾರಿಸಿದೆ.
ಅದರಂತೆ ಸಚಿವಾಲಯದ ಅಡಿಯಲ್ಲಿರುವ ವಿವಿಧ ವಿಭಾಗಗಳ ಸ್ವಚ್ಛತಾ ಪೂರ್ವ ಮತ್ತು ನಂತರದ ಫೋಟೋಗಳನ್ನು ಕಳುಹಿಸಬೇಕಿದೆ.
ಇಷ್ಟೇ ಅಲ್ಲದೇ ನ್ಯಾಯಾಲಯದ ಹಳೆಯ ಕೇಸ್ಗಳು, ಬಾಕಿ ಕಡತಗಳು, ವಿವಿಧ ಸೇವೆಗಳ ದಾಖಲೆಗಳು, ಆಂತರಿಕ ಸಚಿವಾಲಯ ಮತ್ತು ಸರ್ಕಾರಿ ಸಂವಹನ, ಹಳೆಯದಾದ ಮತ್ತು ಬಳಕೆಯಾಗದ ವಸ್ತುಗಳ ಹರಾಜು ಸೇರಿದಂತೆ ಇತರ ಕಾರ್ಯಗಳಿಗೆ ವಿಭಾಗಗಳಿಗೆ ಸಂದೇಶ ಕಳುಹಿಸಲಾಗಿದೆ.
ನ್ಯಾಯಾಲಯದ ಪ್ರಕರಣಗಳನ್ನು ಪರಿಶೀಲಿಸಲು ಎಪ್ರಿಲ್ 2017ರ ವರೆಗೆ ಮೀಸಲಿಡಲಾಗಿದೆ.
ಆಗಸ್ಟ್ ತಿಂಗಳಿನಲ್ಲಿ ಸ್ವಚ್ಛತಾ ಪಖ್ವಾದಾ (ಸ್ವಚ್ಛತಾ ಕಾರ್ಯಕ್ರಮ) ನಡೆಸಲಾಗಿದ್ದು, ೧,೫೯೧ ಕಡತಗಳ ವಿಲೇವಾರಿ, ವಸ್ತುಗಳ ಹರಾಜು ಕಾರ್ಯ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.