ನವದೆಹಲಿ: ರೈಲ್ವೆ ಪ್ರಯಾಣಿಕರು ಐಆರ್ಸಿಟಿಸಿ ವೆಬ್ಸೈಟ್ ಮೂಲಕ ಆಗಸ್ಟ್ 31ರಿಂದ ಆನ್ಲೈನ್ ಟಿಕೆಟ್ ಬುಕಿಂಗ್ ಸಂದರ್ಭದಲ್ಲಿ 92 ಪೈಸೆ ಪಾವತಿಸಿದಲ್ಲಿ 10 ಲಕ್ಷ ರೂ. ವಿಮೆ ಪಡೆಯಬಹುದಾಗಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಸಚಿವ ಸುರೇಶ್ ಪ್ರಭು ತಮ್ಮ ಬಜೆಟ್ ಘೋಷಣೆ ಸಂದರ್ಭದಲ್ಲಿ ರೈಲು ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ವೇಳೆ ಐಚ್ಛಿಕ ವಿಮೆ ಒದಗಿಸುವುದಾಗಿ ಹೇಳಿದ್ದರು. ಈ ಸೌಲಭ್ಯ ಉಪನಗರ ರೈಲು ಪ್ರಯಾಣಿಕರನ್ನು ಹೊರತುಪಡಿಸಿ ಇತರ ಎಲ್ಲ ವರ್ಗದ ಪ್ರಯಾಣಿಕರಿಗೆ ಲಭ್ಯವಿರಲಿದೆ. ಇದು ಸದ್ಯ ಪರೀಕ್ಷಾರ್ಥವಾಗಿ ಆರಂಭಗೊಳ್ಳಲಿದೆ.
5 ವರ್ಷದ ಮಕ್ಕಳು, ವಿದೇಶಿಗರಿಗೂ ವಿಮಾ ಸೌಲಭ್ಯ ದೊರೆಯಲಿದ್ದು, ದೃಢೀಕೃತ ಟಿಕೆಟ್, ಆರ್ಎಸಿ, ವೈಟಿಂಗ್ ಲಿಸ್ಟ್ನ ಟಿಕೆಟ್ ಹೊಂದಿದ ಪ್ರಯಾಣಿಕರಿಗೂ ವಿಮಾ ಕವರ್ ಲಭ್ಯವಾಗಲಿದೆ.
ಈ ವಿಮಾ ಯೋಜನೆ ಪ್ರಯಾಣಿಕರ ಸಾವು, ಅಂಗವೈಕಲ್ಯದ ಸಂದರ್ಭ ಅವರ ಪ್ರಯಾಣಿಕರು/ ಕಾನೂನಾತ್ಮಕ ಉತ್ತಾಧಿಕಾರಿಗಳು/ನಿರ್ದೇಶಿತ ವ್ಯಕ್ತಿಗಳಿಗೆ 10 ಲಕ್ಷ ರೂ. ಪರಿಹಾರ ನೀಡಲಿದೆ. ಭಾಗಶಃ ಅಂಗವೈಕಲ್ಯ ಹೊಂದಿದವರಿಗೆ 7.5 ರೂ. ಲಕ್ಷ, ಆಸ್ಪತ್ರ ವೆಚ್ಚ ರೂ. 2 ಲಕ್ಷ, ಅಪಘಾತ ಸ್ಥಳದಿಂದ ಮರ್ತ್ಯ ಸಾಗಣೆಗೆ ರೂ. 10,000 ಸೇರಿದಂತೆ ಉಗ್ರರ ದಾಳಿ, ಗಲಭೆ, ದರೋಡೆ ಸಂದರ್ಭದಲ್ಲಿ ವಿಮಾ ಪರಿಹಾರ ನೀಡಲಿದೆ.
ಆದಾಗ್ಯೂ, ಯಾವುದೇ ಪ್ರಯಾಣ ಟಿಕೆಟ್ ರದ್ದತಿಗೆ ಮರುಪಾವತಿ ಮಾಡಲಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.