ನವದೆಹಲಿ: ಒಂದು ಪ್ರಮುಖ ಹೆಜ್ಜೆಯಂತೆ ಕೇಂದ್ರ ಸಚಿವ ಸಂಪುಟ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ 2016ಗೆ ಬುಧವಾರ ಅನುಮೋದನೆ ನೀಡಿದ್ದು, ಇದು ವಾಣಿಜ್ಯ ತಾಯ್ತವನ್ನು ನಿಷೇಧಿಸಲಿದೆ. ಅಗತ್ಯ ಸಂದರ್ಭಗಳಲ್ಲಿ ಮಾತ್ರ ದಂಪತಿಗಳು ಬಾಡಿಗೆ ತಾಯಿಯನ್ನು ಪಡೆಯಬಹುದಾಗಿದೆ.
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರು ಇನ್ನು ಮುಂದೆ ಬಡಿಗೆ ತಾಯ್ತನಕ್ಕೆ ಕಡಿವಾಣ ಬೀಳಲಿದ್ದು, ವಾಣಿಜ್ಯ ಮಾತೃತ್ವ ನಿಷೇಧಿಸಲಾಗುವುದು. ಮಕ್ಕಳಿಲ್ಲದ ದಂಪತಿಗಳು ಮಕ್ಕಳನ್ನು ಪಡೆಯುವುದಕ್ಕಾಗಿ ಬಾಡಿಗೆ ತಾಯಿಯನ್ನು ನಿಯೋಜಿಸುವಂತಿಲ್ಲ. ಬಂಜೆತನ ಕಂಡುಬಂದಲ್ಲಿ ಅಗತ್ಯ ಸಂದರ್ಭದಲ್ಲಿ ನಿಕಟ ಸಂಬಂಧಿಗಳ ಹೊರತು ಇತರರನ್ನು ಪರ್ಯಾಯ ಮಾತೃತ್ವಕ್ಕಾಗಿ ನಿಯೋಜಿಸುವಂತಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ನಿವಾಸಿಗಳಿಗೆ ಮಾತೃ ಪರ್ಯಾಯ ತಾಯ್ತನಕ್ಕೆ ಅನುಮತಿ ನೀಡಲಾಗಿದ್ದು, ಅನಿವಾಸಿ ಭಾರತೀಯರು ಅಥವಾ ಓಸಿಐ (OCI) ಕಾರ್ಡ್ ಹೋಂದಿದವರಿಗೆ ಅನ್ವಯಿಸುವುದಿಲ್ಲ ಎಂದು ಸ್ವರಾಜ್ ಹೇಳಿದ್ದಾರೆ.
ಮಕ್ಕಳನ್ನು ಹೊಂದಿದ ಅಥವಾ ದತ್ತು ಮಕ್ಕಳನ್ನು ಪಡೆದವರು, ಏಕ ಪಾಲಕರು, ಲಿವ್-ಇನ್ ಜೋಡಿಗಳು, ಸಲಿಂಗಕಾಮಿ ಜೋಡಿಗಳು ಬಾಡಿಗೆ ತಾಯ್ತನ ನಿಯೋಜುವ ಅವಕಾಶ ಹೊಂದುವುದಿಲ್ಲ. ಕಾನೂನು ಬದ್ಧವಾಗಿ ಮದುವೆಯಾಗಿ 5 ವರ್ಷ ದಾಂಪತ್ಯ ಜೀವನ ನಡೆಸಿದ ಬಳಿಕವೇ ಬಾಡಿಗೆ ತಾಯ್ತನದ ನೆರವು ಪಡೆಯಬಹುದು ಎಂದು ಸಚಿವೆ ಸ್ವರಾಜ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.