ನವದೆಹಗಲಿ: ತಾಜ್ಮಹಲ್ನಲ್ಲಿ ಜನಸಂದಣಿ ನಿರ್ವಹಣೆಗೆ ತನ್ನ ಪ್ರಯತ್ನದ ಭಾಗವಾಗಿ ಪ್ರವಾಸಿಗರ ಭೇಟಿಯನ್ನು 3-4 ಗಂಟೆಗಳಿಗೆ ಸೀಮಿತಗೊಳಿಸಬೇಕು ಎಂದು ಭಾರತದ ಪುರಾತತ್ವ ಇಲಾಖೆ (ಎಎಸ್ಐ) ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರನ್ನೊಳಗೊಂಡ ಪೀಠ ತಾಜ್ಮಹಲ್ನಲ್ಲಿ ಜನರ ನಿರ್ವಹಣೆ ಬಗ್ಗೆ ವಿವರ ನೀಡುವಂತೆ ಕೋರಿದ್ದು, ಇದರ ಹೊಸ ನಿಯಮಗಳ ಪ್ರಸ್ತಾಪ ಇದ್ದ ಮಾಹಿತಿ ನೀಡುತ್ತ ಪುರಾತತ್ವ ಇಲಾಖೆ ವಕೀಲ ಎ.ಡಿ. ಎನ್ ರಾವ್ ಸುಪ್ರೀಂ ಕೋರ್ಟ್ಗೆ ಈ ಬಗ್ಗೆ ತಿಳಿಸಿದ್ದಾರೆ.
ತಾಜ್ಮಹಲ್ ವೀಕ್ಷಿಸಲು ಒಂದೇ ಬಾರಿ ಜನರು ಆಗಮಿಸುತ್ತಿದ್ದು, ಸಮಸ್ಯೆ ಎದುರಾಗುತ್ತಿದೆ. ಅದಕ್ಕಾಗಿ ಜನರಿಗೆ 3-4 ಗಂಟೆಗಳ ನಿರ್ದಿಷ್ಟ ಸಮಯವನ್ನು ಸೀಮಿತಗೊಳಿಸಲು ಬಯಸಿದ್ದೇವೆ ಎಂದು ಎ.ಡಿ.ಎನ್. ರಾವ್ ಹೇಳಿದ್ದಾರೆ.
ಈ ನಡುವೆ ರಾವ್ ಅವರು ಪ್ರವಾಸಿಗರಿಗಾಗಿ 45 ನಿಮಿಷಗಳ 5 ಅವಧಿಯನ್ನು ನಡೆಸಲು ಇಲಾಖೆಗೆ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ. ಪ್ರಸ್ತುತ ೩೦ ನಿಮಿಷಗಳ 8 ಅವಧಿಗಳಲ್ಲಿ ಜನರನ್ನು ಬಿಡಲಾಗುತ್ತಿದ್ದು, ಇದು ಅವರ ತೃಪ್ತಿಕರ ವೀಕ್ಷಣೆಗೆ ಸಾಲುತ್ತಿಲ್ಲ ಎಂದು ರಾವ್ ಹೇಳಿದ್ದಾರೆ.
ಪ್ರವಾಸಿಗರು ತೃಪ್ತಿಕರವಾಗಿ ತಾಜ್ಮಹಲ್ ವೀಕ್ಷಿಸುವಂತಾಗಬೇಕು ಎಂದು ಪುರಾತತ್ವ ಇಲಾಖೆಗೆ ನಿರ್ದೇಶಿಸುವಂತೆ ಅಜಯ್ ಅಗರ್ವಾಲ್ ಸಲ್ಲಿಸಿದ ಮನವಿಯ ಬಲಿಕ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.