ನವದೆಹಲಿ: 2015ರ ಎಪ್ರಿಲ್ನಲ್ಲಿ ಸಂಭವಿಸಿದ ಭೂಕಂಪದ ಬಳಿಕ ನೇಪಾಳದ ಪುನರ್ನಿರ್ಮಾಣಕ್ಕೆ ಭಾರತ ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ನೇಪಾಳದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ ನೇಪಾಳ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಬಿಮಲೇಂದ್ರ ನಿಧಿ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನೇಪಾಳದ ಪುನರ್ನಿರ್ಮಾಣಕ್ಕಾಗಿ ನೆಪಾಳ ಸರ್ಕಾರ ಮತ್ತು ಜನರ ಬೆಂಬಲಕ್ಕೆ ಭಾರತ ಬದ್ಧವಾಗಿದೆ. ಭಾರತ ಮತ್ತು ನೇಪಾಳ ಸರ್ಕಾರಗಳ ಮಧ್ಯೆ ಸಂಬಂಧಗಳು ಉತ್ತಮವಾಗಿರದಿದ್ದರೂ ಎರಡೂ ರಾಷ್ಟ್ರಗಳ ನಡುವಿನ ಜನರು ಉತ್ತಮ ಸಂಬಂಧ ಹೊಂದಿದ್ದು, ಭಾರತವು ನೇಪಾಳದ ಜನರೊಂದಿಗೆ ಸ್ನೇಹ ಮತ್ತು ರಕ್ತಸಂಬಂಧಗಳ ಸಾಂಪ್ರದಾಯಿಕ ಬಂಧಗಳನ್ನು ಬಲಪಡಿಸುವಲ್ಲಿ ಬದ್ಧವಾಗಿದೆ ಎಂದು ಮೋದಿ ಹೇಳಿರುವುದಾಗಿ ಪ್ರಧಾನಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ನೇಪಾಳದ ಪುನರ್ನಿಮಾಣದ ಕಾರ್ಯದಲ್ಲಿ ಭಾರತ ಅತಿ ದೊಡ್ಡ ದಾನಿಯಾಗಿದೆ.
ಇದೇ ವೇಳೆ ಪ್ರಧಾನಿ ಮೋದಿ ಅವರು ನೇಪಾಳದ ಉಪ ಪ್ರಧಾನಿ ಹಾಗೂ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಿಮಲೇಂದ್ರ ನಿಧಿ ಅವರಿಗೆ ಅಭಿನಂದಿಸಿದರು ಹಾಗೂ ನೇಪಾಳ ಪ್ರಧಾನಿ ಪ್ರಚಂಡ ನೇತೃತ್ವದ ಹೊಸ ಸರ್ಕಾರಕ್ಕೆ ಶುಭ ಕೋರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.