ಮುಂಬಯಿ: ಈ ಬಾರಿ ಸಹೋದರರಿಗೆ ರಾಖಿ ಕಳುಹಿಸುವ ಕಾರ್ಯ ಹೆಚ್ಚು ಅನುಕೂಲಕರವಾಗಲಿದೆ. ಜನರು ಕಳುಹಿಸುವ ರಾಖಿಗಳನ್ನು ನಿರ್ದಿಷ್ಟ ಸಮಯದೊಳಗೆ ತಲುಪಿಸಲು ಮುಂಬಯಿ ಅಂಚೆ ಇಲಾಖೆ ಆಗಸ್ಟ್ 14 (ಭಾನುವಾರ)ರಂದು ಕೂಡ ಕಾರ್ಯ ನಿರ್ವಹಿಸಲಿದೆ.
ಆಗಸ್ಟ್ 13ರ ಶನಿವಾರ ಮಧ್ಯಾಹ್ನದವರೆಗೆ ಕಾರ್ಯ ನಿರ್ವಹಿಸುತ್ತದೆ. ಇನ್ನು ಆಗಸ್ಟ್ 14 ಭಾನುವಾರ ಹಾಗೂ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ರಜೆ ಇರಲಿದೆ. ಆದರೆ ಜನರ ರಾಖಿ ಮೇಲ್ ಸರಿಯಾದ ಸಮಯಕ್ಕೆ ತಲುಪಿಸುವ ಉದ್ದೇಶದಿಂದ ಮುಂಬಯಿ ನಗರ, ನವಿ ಮುಂಬಯಿ, ಥಾಣೆ, ಫಾಲಗಾರ್ ಮತ್ತು ರಾಯಗಢ್ ಜಿಲ್ಲೆಯ ಅಂಚೆ ಕಚೇರಿಗಳು ಭಾನುವಾರವೂ ತೆರೆದಿರಲಿದ್ದು, ವಿಶೇಷ ವಿತರಣಾ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ಮುಂಬಯಿ ಅಂಚೆ ವಿಭಾಗದ ನಿರ್ದೇಶಕ ವಿ.ವಿ. ನಾಯಕ್ ಹೇಳಿದ್ದಾರೆ.
ಸಾಮಾನ್ಯ ರಾಖಿ ಮೇಲ್ಗಳಲ್ಲದೇ ಎಲ್ಲ ರೀತಿಯ ಮೇಲ್ಗಳನ್ನು ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.