ನವದೆಹಲಿ : ದೇಶದ ಅತೀ ಕಡು ಬಡವನಿಗೆ ನೀಡುವಂತೆ ಒಂದು ಲಕ್ಷ ರೂಪಾಯಿಯನ್ನು ಪ್ರಧಾನಿ ಸಚಿವಾಲಯಕ್ಕೆ ದಾನವಾಗಿ ನೀಡಿದ್ದ ರಾಜಸ್ಥಾನ ಮೂಲದ ನಿವೃತ್ತ ಶಿಕ್ಷಕರೋರ್ವರಿಗೆ ತೀವ್ರ ನಿರಾಸೆಯಾಗಿದೆ. ಕಾರಣ ದೇಶದ ಅತೀ ಬಡವ ಯಾರು ಎಂಬುದನ್ನು ಪತ್ತೆ ಮಾಡಲಾಗದೆ ಪ್ರಧಾನಿ ಸಚಿವಾಲಯ ಅವರ ಹಣವನ್ನು ಅವರಿಗೇ ವಾಪಾಸ್ ಮಾಡಿದೆ.
ಕಳೆದ ವರ್ಷ ದೀಪ್ ಚಂದ್ ಶರ್ಮಾ ಎಂಬ ನಿವೃತ್ತ ಶಿಕ್ಷಕ ಪ್ರಧಾನಿ ಸಚಿವಾಲಯಕ್ಕೆ ಒಂದು ಲಕ್ಷ ರೂಪಾಯಿಯನ್ನು ಕಳುಹಿಸಿ ಇದನ್ನು ದೇಶದ ಅತೀ ಬಡವನಿಗೆ ಅಥವಾ 100 ಅತೀ ಬಡವರಲ್ಲಿ ಶ್ರೇಷ್ಠನಾದ ಒಬ್ಬ ವ್ಯಕ್ತಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಆದರೆ ದೇಶದ ಅತೀ ಕಡು ಬಡವ ಯಾರೆಂದು ಪತ್ತೆ ಮಾಡುವುದು ಕಷ್ಟಕರವಾದ ಕಾರ್ಯ ಎಂದಿರುವ ಪ್ರಧಾನಿ ಸಚಿವಾಲಯ, ದೇಶದ ಅತೀ ಶ್ರೀಮಂತ ಯಾರು, ಅವನ ಬಳಿ ಎಷ್ಟು ಆಸ್ತಿ ಇದೆ ಎಂಬುದನ್ನು ಫೋರ್ಬ್ಸ್ ಸೇರಿದಂತೆ ಹಲವಾರು ಸಂಸ್ಥೆಗಳು ಲೆಕ್ಕ ಹಾಕುತ್ತವೆ. ಆದರೆ ದೇಶದ ಅತೀ ಬಡವ ಯಾರು ಎಂಬ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದಿದೆ.
2012 ರ ಅಧಿಕೃತ ದಾಖಲೆ ಭಾರತದಲ್ಲಿ 363 ಮಿಲಿಯನ್ ಅಥವಾ ಶೇ. 29.5 ರಷ್ಟು ಬಡವರು ಇದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಪಿಎಂಓ ಹೇಳಿದೆ.
ಫೆಬ್ರವರಿಯಲ್ಲಿ ದೀಪ್ ಚಂದ್ ಹಣವನ್ನು ಅವರಿಗೇ ಪಿಎಂಓ ವಾಪಾಸ್ ಮಾಡಿದೆ. ಆದರೆ ಇದೀಗ ಆ ಹಣವನ್ನು ಅವರು ಪ್ರಧಾನಿ ವಿಪತ್ತು ನಿರ್ವಹಣಾ ಫಂಡ್ಗೆ ಕಳುಹಿಸಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.