ಚೆನ್ನೈ: ತಮಿಳುನಾಡಿನ ರಾಮನಾಥಪುರಂನ 1600 ಮೆಗಾ ವ್ಯಾಟ್ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಪ್ರಸರಣಕ್ಕೆ ವಿರುಧುನಗರದಲ್ಲಿ 2×1500 ಎಂವಿಎ ವಿದ್ಯುತ್ ಉಪ ಸ್ಥಾವರ ಸ್ಥಾಪನೆ ಸೇರಿದಂತೆ ಒಟ್ಟು 4126 ಕೋಟಿ ವಿದ್ಯುತ್ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಘೋಷಿಸಿದ್ದಾರೆ.
ರಾಮನಾಥಪುರಂನ ಉಪ್ಪೂರ್ನಲ್ಲಿರುವ 2×800 ಮೆಗಾವ್ಯಾಟ್ ವಿದ್ಯುತ್ ಕೇಂದ್ರ ಸ್ಥಾಪನೆಯ ಕಾರ್ಯ ಪ್ರಗತಿಯಲ್ಲಿದ್ದು, ಅದು 2020ರ ಒಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ. ಈ ಕೇಂದ್ರದಿಂದ ವಿದ್ಯುತ್ ಪ್ರಸಾರ ಮಾಡಲು 2000 ಕೋಟಿ ರೂ. ವೆಚ್ಚದಲ್ಲಿ ವಿರಿಧುನಗರದಲ್ಲಿ ಉಪ-ಕೇಂದ್ರ ಸ್ಥಾಪಿಸಲಾಗುವುದು.
ಉದಂಕುಡಿ ವಿದ್ಯುತ್ ಸ್ಥಾವರದಲ್ಲಿ ಉತ್ಪಾದನೆಗೊಂಡ ವಿದ್ಯುತ್ನ್ನು ಕೂಡ ಈ ಉಪ-ಕೇಂದ್ರದ ಮೂಲಕ ರಾಜ್ಯದ ಇತರ ಭಾಗಗಳಿಗೆ ಪ್ರಸಾರ ಮಾಡಲಾಗುವುದು. 765 ಕೆ.ವಿ. ಅರಿಯಾಲೂರ್-ಕೊಂಬತ್ತೂರು ಉಪ ಕೇಂದ್ರವನ್ನು ಕೂಡ ವಿರುಧುನಗರ ಕೇಂದ್ರಕ್ಕೆ ಸಂಪರ್ಕಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಅಲ್ಲದೇ ಕಾಯಥರು, ಕಮುಥಿ, ತಪ್ಪಕುಂಡುವಿನ ಸೌರ ಮತ್ತು ಪವನಶಕ್ತಿ ಒಳಗೊಂಡ 400 ಕೆ.ವಿ. ಘಟವನ್ನು ವಿರುಧುನಗರಕ್ಕೆ ಸಂಪರ್ಕಿಸಲಾಗುವುದು. 1970ರಿಂದ ಕಾರ್ಯ ನಿರ್ವಹಿಸುತ್ತಿರುವ ಕೊಡಯರ್ ಜಲಶಕ್ತಿ ವಿದ್ಯುತ್ ಸ್ಥಾವರದ ಅಭಿವೃದ್ಧಿ, ಆಧುನೀಕರಣಕ್ಕೆ ರೂ.80 ಕೋಟಿಯನ್ನು ಘೋಷಿಸಿದ್ದಾರೆ.
ಚೆನ್ನೈ ಮತ್ತು ಸುತ್ತಲಿ ಭಾಗಗಳಲ್ಲಿ 17,500 ಟ್ರಾನ್ಸ್ಫಾಮರ್ಗಳನ್ನು ಬದಲಿಸಲು 1750 ಕೋಟಿ ರೂ. ನಿಯೋಜನೆ ಸೇರಿದಂತೆ ಇದರ ಜೊತೆಗೆ ಇತರ ಹಲವು ವಿದ್ಯುತ್ ಯೋಜನೆಗಳನ್ನು ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.