ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ರಘುರಾಮ್ ರಾಜನ್ ಅವರು ತನ್ನ ಕೆಲಸವನ್ನು ‘ಅದ್ಭುತ’ ಎಂದು ಹೇಳಿದ್ದಾರೆ. ಜೊತೆಗೆ ಇದರ ಪ್ರತಿ ಕ್ಷಣವನ್ನು ಆನಂದಿಸಿದೆ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಮಾಜಿ ಮುಖ್ಯಸ್ಥರಾಗಿದ್ದ ರಾಜನ್ ಅವರ ಮೂರು ವರ್ಷಗಳ ಸೇವಾವಧಿ ಸೆಪ್ಟೆಂಬರ್ 4ರಂದು ಪೂರ್ಣಗೊಳ್ಳಲಿದ್ದು, ಬಳಿಕ ಅಮೇರಿಕಾದಲ್ಲಿ ಶೈಕ್ಷಣಿಕ ವೃತ್ತಿಗೆ ಮರಳಲಿದ್ದಾರೆ.
ದಿನದ ಕೊನೆಯಲ್ಲಿ ನೀವು ಉಪಯುಕ್ತ ಕೊಡುಗೆ ಮಾಡಿದ್ದೀರಿ ಎಂದು ಭಾವಿಸಿದ್ದರೆ ಆ ದೃಷ್ಟಿಯಲ್ಲಿ ಇದೊಮದು ಅದ್ಭುತ ಕೆಲಸ, ಇದರ ಪ್ರತಿ ಕ್ಷಣವನ್ನು ನಾನು ಅನುಭವಿಸಿದೆ ಎಂದು ರಾಜನ್ ಹೇಳಿದ್ದಾರೆ.
ತಮ್ಮ ಕೊನೆಯ ವಿತ್ತನೀತಿಯನ್ನು ಮಂಗಳವಾರ ಪ್ರಕಟಿಸಿದ ಅವರು ಶೇ. 6.5ರ ಅತೀ ಕಡಿಮೆ ರೆಪೊದರವನ್ನು ಕಾಯ್ದುಕೊಂಡಿದ್ದಾರೆ. ಬೆಲೆ ಏರಿಕೆ ಮತ್ತು 7ನೇ ವೇತನ ಆಯೋಗದ ನೌಕರರಿಗೆ ವೇತನ ಹೆಚ್ಚಿಸಲಾಗಿದ್ದು, ಮುಂದಿನ ಮಾರ್ಚ್ 2017ರಲ್ಲಿ ಹಣದುಬ್ಬವರ ಶೇ.5ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಚಿಲ್ಲರೆ ಹಣದುಬ್ಬರವನ್ನು ಗಮನದಲ್ಲಿರಿಸಿಕೊಂಡು ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅಕ್ಟೋಬರ್ 4ರಿಂದ ಹೊಸ ನೀತಿ ಪ್ರಕಟಗೊಳ್ಳಲಿದೆ. ಜಿಎಸ್ಟಿ ಮಸೂದೆ ಅಂಗೀಕಾರದಿಂದ ಆರ್ಥಿಕ ಸುಧಾರಣೆಯನ್ನು ನಿರೀಕ್ಷಿಸಬಹುದು ಎಂದು ರಘುರಾಮ್ ರಾಜನ್ ಹೇಳಿದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.