ನವದೆಹಲಿ : ಯುವಜನತೆಯ ಹೃದಯದಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಹುಟ್ಟುಹಾಕುವ ಸದ್ದುದ್ದೇಶದಿಂದ ಆರ್ಎಸ್ಎಸ್ ಬೀದಿ ನಾಟಕದ ಉತ್ಸವವನ್ನು ಹಮ್ಮಿಕೊಳ್ಳಲು ಮುಂದಾಗಿದೆ. ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತಾ ಭಾವನೆಯನ್ನು ಬಿತ್ತಲು ಮತ್ತು ತನ್ನ ಸಂಘಟನೆಯನ್ನು ಬಲಿಷ್ಠಗೊಳಿಸಲು ಆರ್ಎಸ್ಎಸ್ ಬೀದಿ ನಾಟಕ ಉತ್ಸವವವನ್ನು ವಿವಿಧ ಕಾಲೇಜು ವಿಶ್ವವಿದ್ಯಾನಿಲಯಗಳಲ್ಲಿ ನಡೆಸಲು ಚಿಂತಿಸಿದೆ.
3 ದಿನಗಳ ಉತ್ಸವ ಇದಾಗಿದ್ದು, ಸೆಪ್ಟೆಂಬರ್ 20 ರಿಂದ ಆರಂಭವಾಗಲಿದೆ. ಸಾಮಾಜಿಕ ಮತ್ತು ರಾಷ್ಟ್ರೀಯ ವಿಷಯಗಳತ್ತ ಹೆಚ್ಚಿನ ಒತ್ತು ನೀಡಲಿದೆ. ಸಂಘದ ಸಿದ್ಧಾಂತ ಪ್ರಚಾರಕ್ಕೂ ಇದರ ಬಳಕೆ ಮಾಡಲಾಗುತ್ತದೆ.
ನಟ ಹಾಗೂ ಬಿಜೆಪಿ ಎಂಪಿ ಆಗಿರುವ ಮನೋಜ್ ತಿವಾರಿ ಮತ್ತು ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಕಾರ್ಯಕ್ರಮ ಸಂಯೋಜನೆ ಮಾಡಲಿದ್ದಾರೆ. ಇವರಿಬ್ಬರೂ ವಿದ್ಯಾರ್ಥಿಗಳು ಕಳುಹಿಸಿಕೊಟ್ಟ ಬೀದಿನಾಟಕಗಳ ಸ್ಕ್ರಿಪ್ಟ್ಗಳನ್ನು ಅಂತಿಮಗೊಳಿಸಿ ಆಡಿಶನ್ ನಡೆಸಲಿದ್ದಾರೆ.
ರಾಜಕೀಯ ಕಾರ್ಯಕ್ರಮ ಅಥವಾ ಉಪನ್ಯಾಸಗಳ ಬದಲು ಬೀದಿ ನಾಟಕಗಳು ಯುವಜನತೆಯನ್ನು ಅತಿ ಪ್ರಬಲವಾಗಿ ತಲುಪುವ ಮಾಧ್ಯಮ ಎಂಬುದನ್ನು ಮನಗಂಡು ಈ ಉತ್ಸವವನ್ನು ನಡೆಸಲಾಗುತ್ತಿದೆ.
3 ದಿನಗಳ ಉತ್ಸವ ಅಂತ್ಯಗೊಂಡ ಬಳಿಕ ಸೆಪ್ಟೆಂಬರ್ 26 ರಿಂದ 29 ರವರೆಗೆ ಮನೋಜ್ ತಿವಾರಿ ಹಾಗೂ ದ್ವಿವೇದಿ ವಿದ್ಯಾರ್ಥಿಗಳಿಗಾಗಿ ವೃತ್ತಿಪರ ಕಾರ್ಯಾಗಾರ ಆಯೋಜನೆ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.