ಸಿಯಾಚಿನ್: ಸಿಯಾಚಿನ್ನಲ್ಲಿ ತಾಪಮಾನ ತೀವ್ರ ಕುಸಿತ ಕಂಡಿದ್ದು, ಭಾರತೀಯ ಸೈನಿಕರು ಶೀಘ್ರದಲ್ಲೇ ಕ್ಯಾಂಪ್ ಬದಲಾವಣೆಯನ್ನು ಮಾಡುವಂತೆ ಸೂಚನೆ ನೀಡಲಾಗಿದೆ.
ವಿಶ್ವದ ಅತಿ ಎತ್ತರ ಮತ್ತು ಅಪಾಯಕಾರಿ ಪ್ರದೇಶವಾದ ಸಿಯಾಚಿನ್ನಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಮೊದಲೇ ಇಲ್ಲಿ ಸೈನಿಕರು ಕಾರ್ಯ ನಿರ್ವಹಿಸುವುದೇ ದುಸ್ತರ. ಇಂತಹ ಪರಿಸ್ಥಿತಿಯಲ್ಲಿ ತಾಪಮಾನ ಕುಸಿತವಾಗಿದ್ದು ಸೈನಿಕರ ಸುರಕ್ಷತೆಗೆ ಕೂಡಾ ಅನಿವಾರ್ಯವಾಗಿದೆ.
ಕಳೆದ 5 ವರ್ಷಗಳಿಗೆ ಹೋಲಿಸಿದರೆ ಸಿಯಾಚಿನ್ನಲ್ಲಿ ಈ ಬಾರಿ 12 ಡಿಗ್ರಿಯಷ್ಟು ತಾಪಮಾನ ಕುಸಿತವಾಗಿ ಎನ್ನಲಾಗಿದೆ. ಚಳಿಯ ತೀವ್ರತೆ ಯೋಧರನ್ನು ಕಾಡುತ್ತಿದ್ದು, ಚಳಿಯಿಂದ ಸೈನಿಕರ ಆರೋಗ್ಯದಲ್ಲೂ ಏರುಪೇರಾಗುತ್ತಿದೆ. ಕೆಲವರಿಗೆ ಹಿಮದಿಂದಲೇ ಗಾಯಗಳಾಗುತ್ತಿದ್ದು, ಈ ತಾಪಮಾನ ಶತ್ರುಗಳ ದಾಳಿಗಿಂತ ಚಳಿಯಿಂದಲೇ ಸಾವನ್ನಪ್ಪುವ ಪರಿಸ್ಥಿತಿ ಎದುರಾಗುವಂತಾಗಿದೆ ಎನ್ನಲಾಗುತ್ತಿದೆ.
ಹವಾಮಾನ ಬದಲಾವಣೆಯಿಂದಾಗಿ ಭೀಕರ ಹಿಮಪಾತ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
ಹೀಗಾಗಿ ಸುರಕ್ಷಿತ ಪ್ರದೇಶಗಳತ್ತ ಕ್ಯಾಂಪ್ ಬದಲಾವಣೆ ಮಾಡಿಕೊಳ್ಳುವಂತೆ ಸೇನಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಯೋಧರ ಕ್ಷೇಮ ಪಾಲನೆಗಾಗಿ ಸೇನಾ ತುಕಡಿಗಳು ಸುರಕ್ಷಿತ ನೆಲೆಯತ್ತ ಪ್ರಯಾಣ ಬೆಳೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ವರ್ಷಾರಂಭದಲ್ಲಿ ಹಿಮಪಾತದಿಂದಾಗಿ 10 ಯೋಧರು ಸಾವನ್ನಪ್ಪಿದ್ದರು. ಹೀಗಾಗಿ ದಿಢೀರ್ ಹಿಮಪಾತಗಳಿಂದ ಸೈನಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಸೈನಿಕರಿಗೆ ಅತ್ಯಾಧುನಿಕ ರೇಡಿಯೋ ಉಪಕರಣಗಳನ್ನು ನೀಡಿದೆ. ಇದರ ಮೂಲಕ ಹಿಮಪಾತ ಮುನ್ಸೂಚನೆಗಳನ್ನು ನೀಡಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.