ಶ್ರೀನಗರ: ಹಿಜ್ಬುಲ್ ಕಮಾಂಡರ್ ಬುರ್ದ್ವಾನ್ ವಾನಿಯ ಹತ್ಯೆಯ ಬಳಿಕ ಹಿಂಸಾಚಾರಕ್ಕೆ ತತ್ತರಿಸಿದ ಹೋಗಿದ್ದ ಜಮ್ಮು ಕಾಶ್ಮೀರದಲ್ಲಿ ಕಳೆದ ಮೂರು ದಿನಗಳಿಂದ ನ್ಯೂಸ್ ಪೇಪರ್ಗಳಿಗೆ ನಿರ್ಬಂಧ ಹೇರಲಾಗಿತ್ತು. ಆದರೆ ಮಂಗಳವಾರದಿಂದ ಮತ್ತೆ ನ್ಯೂಸ್ ಪೇಪರ್ಗಳು ಲಭ್ಯವಾಗಿದೆ.
ಸರ್ಕಾರ ನ್ಯೂಸ್ ಪೇಪರ್ಗಳಿಗೆ ನಿರ್ಬಂಧ ಹೇರಿರುವುದಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು. ಆದರೆ ಇದರಲ್ಲಿ ಸಿಎಂ ಮೆಹಬೂಬ ಮುಫ್ತಿ ಅವರದ್ದು ಏನೂ ತಪ್ಪಿಲ್ಲ, ಅವರ ಅನುಮತಿ ಇಲ್ಲದೆಯೇ ಪತ್ರಿಕೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಅವರ ವಕ್ತಾರ ಅಮಿತಾಭ್ ಮಟ್ಟೂ ತಿಳಿಸಿದ್ದಾರೆ.
ಆದರೆ ಪತ್ರಿಕೆಗಳು ಸರ್ಕಾರವನ್ನು ದೂಷಿಸಿದ್ದು, ಶಾಂತಿ ಸ್ಥಾಪನೆಗೆ ಸರ್ಕಾರ ಅವಶ್ಯಕತೆಯಿಲ್ಲದ ಕ್ರಮ ತೆಗೆದುಕೊಂಡಿದೆ ಎಂದು ಆರೋಪಿಸಿವೆ.
ಕಠಿಣ ಕರ್ಫ್ಯೂವನ್ನು ಹೇರಿಕೆ ಮಾಡಿದ ಪರಿಣಾಮವಾಗಿ ದಿನಪತ್ರಿಕೆಗಳ ಹಂಚಿಕೆ ಕಷ್ಟಸಾಧ್ಯ. ಹೀಗಾಗಿ ಅವುಗಳ ಹಂಚಿಕೆಗೆ ತಡೆ ನೀಡಲಾಗಿತ್ತು. ಜನರ ಜೀವನ ಉಳಿಸಲು ಮತ್ತು ಶಾಂತಿ ಪ್ರಯತ್ನವನ್ನು ಬಲಗೊಳಿಸಲು ಇದು ಅನಿವಾರ್ಯವಾಗಿತ್ತು ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.
ಮಾಧ್ಯಮಗಳ ಮೇಲೆ ಯಾವುದೇ ಕಾರಣಕ್ಕೂ ನಿಷೇಧ ಹೇರುವುದಿಲ್ಲ ಎಂದು ಸಿಎಂ ಕಛೇರಿ ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.