ಸ್ಯಾನ್ ಫ್ರಾನ್ಸಿಸ್ಕೋ: ಭಾರತ ಕೈಗೊಂಡಿರುವ ಕ್ರಾಂತಿಕಾರಿ ಯೋಜನೆಗಳು ಜಾಗತಿಕ ಉದ್ಯಮಿಗಳಲ್ಲಿ ಧನಾತ್ಮಕತೆಯನ್ನು ಸೃಷ್ಟಿಸಿದೆ ಎಂದಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಭಾರತದ ಸ್ಟಾರ್ಟ್ಅಪ್ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸಿಲಿಕಾನ್ ವ್ಯಾಲಿಯ ಐಟಿ ತಜ್ಞರಿಗೆ ಕರೆ ನೀಡಿದ್ದಾರೆ.
ಸ್ಯಾನ್ಫ್ರಾನ್ಸಿಸ್ಕೋದಲ್ಲಿ ನಡೆದ ಗ್ಲೋಬಲ್ ಟೆಕ್ನಾಲಜಿ ಪ್ರೊಫೆಶನಲ್ ಅಸೋಸಿಯೇಶನ್ನಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕತೆ ಅದರಲ್ಲೂ ಮುಖ್ಯವಾಗಿ ರಸ್ತೆ, ಹೈವೇ, ಶಿಪ್ಪಿಂಗ್ನಂತಹ ಮೂಲಸೌಕರ್ಯ ವಲಯದಲ್ಲಿ ತಮ್ಮ ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ತರುವಂತೆ ಸಿಲಿಕಾನ್ ವ್ಯಾಲಿಯಲ್ಲಿನ ಭಾರತೀಯ ವೃತ್ತಿಪರರಿಗೆ ಕರೆ ನೀಡಿದರು.
ಕೃಷಿ ಅಮೆರಿಕ ಮತ್ತು ಭಾರತದ ನಡುವೆ ಸಹಕಾರವಿರುವ ಮತ್ತೊಂದು ವಲಯ, ಭಾರತದಲ್ಲಿ ಉದ್ಯಮವನ್ನು ಆರಂಭಿಸಲು ಬೇಕಾದ ಎಲ್ಲಾ ಸವಲತ್ತುಗಳನ್ನು ನಾವು ಒದಗಿಸಲಿದ್ದೇವೆ ಎಂದು ಗಡ್ಕರಿ ಉದ್ಯಮಿಗಳಿಗೆ ಭರವಸೆ ನೀಡಿದರು.
ಅಮೆರಿಕಾಗೆ ಒಂದು ವಾರಗಳ ಸುಧೀರ್ಘ ಪ್ರವಾಸಕೈಗೊಂಡಿರುವ ಅವರು, ಹಿಮಾಲಯದ ಮೂಲಕ ಉತ್ತರಾಖಂಡದಿಂದ ಮಾನಸಸರೋವರಕ್ಕೆ ರಸ್ತೆ ನಿರ್ಮಾಣ ಮಾಡಲು ಬೇಕಾದ ಪರಿಕರಗಳಿಗಾಗಿ ಆಸ್ಟ್ರೇಲಿಯಾದ ಮನವಿ ಮಾಡಿಕೊಂಡಿದ್ದಾರೆ.
ದಿನಕ್ಕೆ ಸಾಮಾನ್ಯವಾಗಿ 2 ಕಿ.ಮೀ ರಸ್ತೆ ನಿರ್ಮಾಣವಾಗುತ್ತಿತ್ತು, ಅದೀಗ 20 ಕಿ.ಮೀಗೆ ತಲುಪಿದೆ ಎಂದ ಅವರು, ಮುಂದಿನ ಎಪ್ರಿಲ್ನಿಂದ 41 ಕಿ.ಮೀಗೆ ಇದು ತಲುಪಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.