ಮಧುರೈ: ತರಕಾರಿಗಳನ್ನು ಬೆಳೆಯಲು ಜಾಗವಿಲ್ಲ ಎಂದು ಕೊರಗುವ ಬದಲು ತಮ್ಮ ಮನೆಯ ಟೆರೆಸ್ ಮೇಲೆಯೇ ವಿವಿಧ ತರಹದ ತರಕಾರಿಗಳನ್ನು ಬೆಳೆದು ಮನೆಯ ಖರ್ಚನ್ನು ಸರಿದೂಗಿಸಬಹುದು ಮತ್ತು ಮನೆಯ ವಾತಾವರಣವನ್ನು ಹಸಿರಾಗಿಡಬಹುದು ಎಂಬ ಬಗ್ಗೆ ಅರಿವು ಮೂಡಿಸುವ ಮಹತ್ವದ ಕಾರ್ಯ ಮಧುರೈನಲ್ಲಿ ನಡೆಯುತ್ತಿದೆ.
ಶರವೇಗದಲ್ಲಿ ನಡೆಯುತ್ತಿರುವ ಆಧುನೀಕರಣ ನಗರಗಳನ್ನು ಕಾಂಕ್ರೀಟ್ ಕಾಡುಗಳನ್ನಾಗಿ ಪರಿವರ್ತಿಸಿದೆ. ಇದಕ್ಕೆ ಮಧುರೈ ಏನೂ ಹೊರತಾಗಿಲ್ಲ. ಆದರೂ ಇಲ್ಲಿನ ಹೆಚ್ಚಿನ ಮನೆಗಳ ಟೆರೆಸ್ ಹಸಿರಿನಿಂದ ಕಂಗೊಳಿಸುತ್ತಿವೆ, ಅನೇಕ ಮನೆಗಳ ಸದಸ್ಯರು ತಮಗೆ ಬೇಕಾದ ತರಕಾರಿಗಳನ್ನು ತಮ್ಮ ಮನೆಯ ಟೆರೆಸ್ ಮೇಲೆಯೇ ಬೆಳೆಯುತ್ತಿದ್ದಾರೆ.
ಅಲ್ಲಿನ ಹೊರ್ಟಿಕಲ್ಚರ್ ಇಲಾಖೆ ಆಸಕ್ತರಿಗೆ ಟೆರೆಸ್ ಗಾರ್ಡನಿಂಗ್ ಕಿಟ್ಗಳನ್ನು ಹಂಚಿಕೆ ಮಾಡುತ್ತಿದೆ. ಈ ಕಿಟ್ನಲ್ಲಿ ವಿವಿಧ ತರಕಾರಿಗಳ ಬೀಜಗಳು, ಗೊಬ್ಬರಗಳು, ಗಿಡಗಳು ಇವೆ. ಇವುಗಳನ್ನು ೫೦೦ ರೂ ನೀಡಿ ಖರೀದಿಸಿ ಹೆಚ್ಚಿನವರು ತಮ್ಮ ಮನೆಯಲ್ಲಿಯೇ ಟೆರೆಸ್ ಗಾರ್ಡನಿಂಗ್ ಮಾಡುತ್ತಿದ್ದಾರೆ.
ವಯಸ್ಸಾದವರಿಗೆ ಮತ್ತು ಹೋಂಮೇಕರ್ಗಳಿಗೆ ಇದೊಂದು ಆರೋಗ್ಯಕರ ಮತ್ತು ಉಪಯುಕ್ತ ಹವ್ಯಾಸ ಎಂದು ಇಲಾಖೆಯ ನಿರ್ದೇಶಕ ಗೋ.ಪೂಪತಿ ಹೇಳುತ್ತಾರೆ.
ಈಗಾಗಲೇ 2,700 ಕಿಟ್ಗಳನ್ನು ಮಾರಾಟ ಮಾಡಲಾಗಿದೆ, ತಮಿಳುನಾಡು ಸರ್ಕಾರ ಟೆರೆಸ್ ಗಾರ್ಡನ್ನನ್ನು ಹೊರ್ಟಿಕಲ್ಚರ್ ಇಲಾಖೆ ಮೂಲಕ ಪ್ರಚುರಡಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.