ತಿರುವನಂತಪುರಂ: ದಕ್ಷಿಣ ಸುಡಾನ್ನಲ್ಲಿ ಸಿಲುಕೊಂಡಿರುವ 300 ಭಾರತೀಯರನ್ನು ತೆರವುಗೊಳಿಸಲು ಭಾರತೀಯ ವಾಯುಸೇನೆಯ ಎರಡು ಸಿ-17 ವಿಮಾನ ಕಳುಹಿಸಲಾಗಿದ್ದು, 152 ಭಾರತೀಯರು ತಿರುವನಂತಪುರಂಗೆ ಬಂದಿಳಿದಿದ್ದಾರೆ.
ವಿದೇಶಾಂಗ ರಾಜ್ಯ ಸಚಿವ ವಿ.ಕೆ. ಸಿಂಗ್ ನೇತೃತ್ವದಲ್ಲಿ ‘ಸಂಕಟ್ ಮೋಚನ್’ ಹೆಸರಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ.
ಎರಡು ವಿಮಾನಗಳು ತಿರುವನಂತಪುರಂ ಮೂಲಕ ದೆಹಲಿಗೆ ತಲುಪಿದ್ದು, ಅವರ ಮುಂದಿನ ಪ್ರಯಾಣಕ್ಕೆ ಏರ್ ಇಂಡಿಯಾ ಮತ್ತು ಭಾರತೀಯ ರೈಲ್ವೆ ಅನುಕೂಲ ಮಾಡಿಕೊಡಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಸಿ-17ನ ಒಂದು ವಿಮಾನದಲ್ಲಿ 10 ಮಹಿಳೆಯರು, 2 ಮಕ್ಕಳು ಸೇರಿದಂತೆ 143 ಮಂದಿ ಇದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಸಿ-17ನ ಇನ್ನೊಂದು ವಿಮಾನದಲ್ಲಿ 9 ಮಂದಿ ಭಾರತೀಯರು, ಇಬ್ಬರು ನೇಪಾಳಿ ನಾಗರಿಕರು ಇದ್ದಾರೆ ಎಂದು ದಕ್ಷಿಣ ಸುಡಾನ್ನ ಭಾರತೀಯ ರಾಯಭಾರಿ ಶ್ರೀಕುಮಾರ್ ಮೆನನ್ ಹೇಳಿದ್ದಾರೆ.
ಈಗಾಗಲೇ 152 ಮಂದಿ ಭಾರತಕ್ಕೆ ಬಂದಿಳಿದಿದ್ದು, ಭಾರತಕ್ಕೆ ಮರಳಲು ಇಚ್ಛಿಸುವ ಇತರರನ್ನು ನಂತರದ ದಿನಗಳಲ್ಲಿ ಭಾರತಕ್ಕೆ ಕರೆತರಲಾಗುವುದು ಎಂದು ಹೇಳಲಾಗಿದೆ.
ದಕ್ಷಿಣ ಸುಡಾನ್ನಲ್ಲಿ ಸೇನೆ ಮತ್ತು ಬಂಡುಕೋರರ ನಡುವೆ ಭುಗಿಲೆದ್ದ ಘರ್ಷಣೆಯಿಂದ ಉಂಟಾಗಿರುವ ಹಿಂಸಾಚಾರದಲ್ಲಿ 150 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ದಕ್ಷಿಣ ಸುಡಾನ್ ಅಧ್ಯಕ್ಷ ಸಾಲ್ವ ಕೈರ್ ರಾಜಧಾನಿ ಜುಬಾದಲ್ಲಿ ಕದನ ವಿರಾಮಕ್ಕೆ ಆದೇಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.