ನ್ಯೂಯಾರ್ಕ್: ಮೆಟ್ರೋಗಳಾದ ದೆಹಲಿ, ಮುಂಬಯಿ, ಚೆನ್ನೈ, ಬೆಂಗಳೂರುಗಳಲ್ಲಿ ಸಂಚಾರ ವ್ಯವಸ್ಥೆ ಹದಗೆಡುತ್ತಿದ್ದು, ಭಾರತದಲ್ಲಿ ರಸ್ತೆ ನಿರ್ವಹಣೆಯ ನಿಖರ ಮಾಹಿತಿ ಒದಗಿಸಲು ಸುಗಮ ಸಂಚಾರ ವ್ಯವಸ್ಥೆ ರೂಪಿಸಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸುಗಮ ಸಂಚಾರ ವ್ಯವಸ್ಥೆ ಕುರಿತ ಎರಡನೇ ಹಂತದ ಮಾತುಕತೆಗೆ ಸಚಿವ ಗಡ್ಕರಿ ಅವರು ಅಮೇರಿಕಾಗೆ ತೆರಳಿದ್ದು, ನ್ಯೂಯಾರ್ಕ್ ಸಿಟಿ ಮತ್ತು ಅಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.
ಸುಗಮ ಸಂಚಾರ ವ್ಯವಸ್ಥೆಯಿಂದ ಅಪಘಾತಗಳು ಮತ್ತು ಟ್ರಾಫಿಕ್ ಸಮಸ್ಯೆಯ ಮೇಲ್ವಿಚಾರಣೆ ಹಾಗೂ ಸಂಚಾರ ಸುಗಮಗೊಳಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.
ಪೊಲೀಸ್ ಮತ್ತು ರಸ್ತೆ ಇಲಾಖೆ, ರಾಜ್ಯ ಸರ್ಕಾರಗಳು, ಪುರಸಭಾ ಸಂಸ್ಥೆಗಳ ಸಹಕಾರದೊಂದಿಗೆ ಸಂಚಾರ ವ್ಯವಸ್ಥೆಯ ನಿರ್ವಹಣೆ, ನಿಯಮ ಉಲ್ಲಂಘನೆ ಪರಿಶೀಲನೆ, ಕಾನೂನು ನಿಯಮಗಳನ್ನು ಜಾರಿಗೆ ತರುವ ಉದ್ದೇಶ ಹೊಂದಿದೆ ಎಂದು ಗಡ್ಕರಿ ಹೇಳಿದ್ದಾರೆ.
ಗಡ್ಕರಿ ಅವರು ಸುಗಮ ಸಂಚಾರ ನಿರ್ವಹಣೆ, ನಗರ ಸಂಚಾರ ನಿರ್ವಹಣೆ, ನಿಯಂತ್ರಣ ಕೇಂದ್ರ, ತಂತ್ರಜ್ಞಾನ ಆಧಾರಿತ ಸಂಚಾರ ವ್ಯವಸ್ಥೆಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.