ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಕುರಿತು ಕ್ರಿಸಿಲ್ ರೇಟಿಂಗ್ ಸಂಸ್ಥೆ ಪ್ರಶಂಸೆ ಮಾಡಿದೆ.
ಪ್ರಧಾನಿ ಮೋದಿ ಅವರ ಆರ್ಥಿಕ ನೀತಿ ರಾಜಕೀಯವನ್ನು ಆಧರಿಸಿಲ್ಲ, ಅಥವಾ ಆರ್ಥಿಕ ಮತ್ತು ವಿತ್ತೀಯ ಉತ್ತೇಜನೆ ಮೂಲಕ ಬೆಳವಣಿಗೆ ವರ್ಧನೆ ಹೊಂದಿಲ್ಲ. ಅದು ವ್ಯವಸ್ಥೆ ಮತ್ತು ರಚನಾತ್ಮಕ ಸುಧಾರಣೆಯಿಂದ ಸಾಧ್ಯವಾಗಿದೆ ಎಂದು ಕ್ರಿಸಿಲ್ ರೇಟಿಂಗ್ ಸಂಸ್ಥೆ ಹೇಳಿದೆ.
ಮೋದಿ ಸರ್ಕಾರದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಒದಗಿಸುವಿಕೆಗೆ ಪ್ರೋತ್ಸಾಹ ಮತ್ತು ಆರ್ಥಿಕ ನೀತಿ ಸಾಕಷ್ಟು ವಿವೇಕಯುತವಾಗಿದೆ. ಮೂಲಸೌಕರ್ಯ ಹೂಡಿಕೆಗೆ ಗುಣಮಟ್ಟದ ಸುಧಾರಣೆ ಮಾಡುವುದರ ಜೊತೆಗೆ ಒಟ್ಟಾರೆ ನಷ್ಟದ ಮೇಲೆ ಗಮನ ಹರಿಸಿದೆ. ವಿತ್ತೀಯ ನೀತಿ ಕೂಡ ಕಡಿಮೆ ಮತ್ತು ಸ್ಥಿರ ಹಣದುಬ್ಬರವನ್ನು ಸೃಷ್ಟಿಸುವಲ್ಲಿ ಕೇಂದ್ರೀಕರಿಸಿದೆ.
ಭಾರತದ ಜಿಡಿಪಿ 2015-16ನೇ ಸಾಲಿನ ಶೇ. 7.6ಕ್ಕೆ ಹೋಲಿಸಿದರೆ, 2016-17ನೇ ಸಾಲಿನಲ್ಲಿ ಇದು ಶೇ.7.9ಕ್ಕೆ ಏರಿಕೆಯಾಗಲಿದೆ ಎಂದು ಕ್ರಿಸಿಲ್ ತನ್ನ ವರದಿಯಲ್ಲಿ ಹೇಳಿದೆ.
ವಿದ್ಯುತ್ ಮತ್ತು ಬ್ಯಾಂಕಿಂಗ್ ವಲಯದಲ್ಲಿ ಸುಧಾರಣೆ ತರಲು ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದ್ದು, ಇದು ಕೂಡಾ ಪ್ರಗತಿಯಲ್ಲಿದೆ.
ಕೇಂದ್ರ ಸರ್ಕಾರ ಪ್ರಮುಖ ಮಸೂದೆ ದಿವಾಳಿತನ ಕೋಡ್ ಮಸೂದೆ 2016 ಜಾರಿಗೆ ತಂದಿದೆ. ಎಲೆಕ್ಟ್ರಾನಿಕ್ ವೇದಿಕೆಯಡಿ ಆಧಾರ್ ಬಿಲ್ ಮೂಲಕ ಅನುದಾನ, ಗ್ರಾಮೀಣ ಜನರಿಗೆ ವೇತನ, ಪಿಂಚಣಿ ವ್ಯವಸ್ಥೆಯನ್ನು ಮಾಡಿದೆ ಎಂದು ಕ್ರಿಸಿಲ್ ಸಂಸ್ಥೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.