ನವದೆಹಲಿ: ವಾರಣಾಸಿಯನ್ನು ಸ್ಮಾರ್ಟ್ಸಿಟಿ ಮಾಡುವಲ್ಲಿ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರ, ಸ್ಮಾರ್ಟ್ಕಾಶಿಗೆ ಸುರಮ್ಯ, ನಿರ್ಮಲ, ಸುರಕ್ಷಿತ, ಸಮ್ಮುನ್ನತ್(ಪ್ರಗತಿಪರ), ಎಕತೀರ್ಥ್(ಇಂಟಿಗ್ರೇಟೆಡ್) ಮತ್ತು ಸಂಯೋಜಿತ್(ಯೋಜಿತ) ಈ ಆರು ಯೋಜನಾ ಅಂಶಗಳನ್ನು ಪ್ರಮುಖ ಸ್ಥಂಭಗಳನ್ನಾಗಿಸಿಕೊಂಡಿದೆ.
ಸ್ಮಾರ್ಟ್ಕಾಶಿಯ ರಚನೆಗೆ ಉಬೇರ್, ಫಿಲಿಪ್ಸ್, ಸ್ಕಿನೀಡರ್ ಎಲೆಕ್ಟ್ರಿಕ್, ಈಬಿಎಂ, ಎರಿಕ್ಸನ್ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಪ್ರಾಚೀನ ಪರಂಪರೆ ಮತ್ತು ಆಧುನಿಕ ನಾವೀನ್ಯತೆಯನ್ನು ಒಳಗೊಂಡ ಸ್ಮಾರ್ಟ್ ಕಾಶಿ ನಿರ್ಮಿಸುವುದು ಕೇಂದ್ರದ ಗುರಿ.
ಅಲ್ಲಿನ ಘಾಟ್ಗಳಲ್ಲಿ ಎಲೆಕ್ಟ್ರಿಕ್ ಶವಾಗಾರವನ್ನು ರಚಿಸುವುದು, ರಸ್ತೆಗಳನ್ನು ವಿಕಲಚೇತನ ಸ್ನೇಹಿಯನ್ನಾಗಿಸುವುದು, ದೇಗುಲಗಳ ಜೀರ್ಣೋದ್ಧಾರ, ಸ್ಥಳೀಯ ಆಹಾರಗಳ, ಕ್ರಾಫ್ಟ್ಗಳ, ಲೈಟ್ ಮತ್ತು ಸೌಂಡ್ ಶೋಗಳ ಪ್ರಚಾರಕ್ಕಾಗಿ ಅಸ್ಸಿ ಘಾಟ್, ಗಂಗಾ ಬಳಿ ನೈಟ್ ಬಝಾರ್ ಸ್ಥಾಪನೆ ಮುಂತಾದ ಯೋಜನೆಗಳನ್ನು ರೂಪಿಸಲಾಗಿದೆ.
ವಾರಣಾಸಿ ಮೆಟ್ರೋ, ಪಾರಂಪರಿಕ ತಾಣಗಳ ಭೇಟಿಗೆ ಪ್ರವೇಶ ಟಿಕೆಟ್, ಎಲ್ಲಾ ಪ್ರಸಿದ್ಧ ತಾಣಗಳಿಗೆ ಇಂಟರ್ಯಾಕ್ಟಿವ್ ಪ್ಯಾನೆಲ್, ಡಿಜಿಟಲ್ ಸಿಗ್ನೇಜ್, ಇಂಟರ್ಯಾಕ್ಟಿವ್ ಮ್ಯಾಪ್ ಅಳವಡಿಕೆ. ಟ್ರಾಫಿಕ್ ಸೆನ್ಸಾರ್, ಸ್ಮಾರ್ಟ್ ಸ್ಟ್ರೀಟ್ ಲೈಟ್, ಪ್ಯಾನಿಕ್ ಬಟನ್ ಮುಂತಾದವುಗಳ ಅಳವಡಿಕೆಯೂ ಯೋಜನೆಯಲ್ಲಿ ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.