ಬೆಂಗಳೂರು : ಸ್ವದೇಶೀ ನಿರ್ಮಿತ ಯುದ್ಧ ವಿಮಾನ ತೇಜಸ್ ಅಧಿಕೃತವಾಗಿ ಇಂದು ಸೇನೆಗೆ ಸೇರ್ಪಡೆಯಾಗಿದೆ.
ಭಾರತೀಯ ವಾಯುಸೇನೆಯ ದಶಕಗಳ ಕನಸಾಗಿದ್ದ ಸ್ವದೇಶೀ ನಿರ್ಮಿತ ಎರಡು ಯುದ್ಧ ವಿಮಾನ ತೇಜಸ್ ಶುಕ್ರವಾರ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ವಾಯು ಸೇನೆಗೆ ಸೇರ್ಪಡೆಗೊಂಡಿತು. ಒಂದನ್ನು ವಾಯುಪಡೆಗೆ ಹಾಗೂ ಇನ್ನೊಂದನ್ನು ನೌಕಾಪಡೆಗೆ ಬಳಸಲಿದ್ದಾರೆ.
ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ತೇಜಸ್ ಯುದ್ಧ ವಿಮಾನಕ್ಕೆ ಪೂಜಿ ಸಲ್ಲಿಸಲಾಯಿತು. ಈ ಸಂದರ್ಭ ಎಲ್ಲಾ ಸಮುದಾಯದ ಧರ್ಮ ಗುರುಗಳು ಪ್ರಾರ್ಥನೆ ಸಲ್ಲಿಸಿದರು.
ದೇಶೀ ನಿರ್ಮಿತ ಯುದ್ಧ ವಿಮಾನ ಎಂಬ ಖ್ಯಾತಿ ಹೊಂದಿದ್ದು, ಬಲಾಢ್ಯ ದೇಶಗಳ ಪ್ರಬಲ ಯುದ್ಧ ವಿಮಾನಗಳಿಗೆ ಸ್ಪರ್ಧೆಯೊಡ್ಡ ಬಲ್ಲ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ದಿಕ್ಸೂಚಿ ವ್ಯವಸ್ಥೆಯನ್ನು ಹೊಂದಿರುವ ತೇಜಸ್ ಬ್ರಹ್ಮೋಸ್ ಕ್ಷಿಪಣಿಯನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಇದು ಹೊಂದಿದೆ.
ಒಟ್ಟು ತೂಕ 7,070 ಕೆಜಿ. ಪ್ರತಿ ಗಂಟೆ 2,205 ಕಿ.ಮೀ. ವೇಗದಲ್ಲಿ ಚಲಿಸುವ ಯುದ್ಧ ವಿಮಾನವು 2,268 ಇಂಧನ ಸಾಮರ್ಥ್ಯ ಹೊಂದಿದೆ.
1983 ರಲ್ಲಿ ಸ್ವದೇಶೀ ಯುದ್ಧ ವಿಮಾನವನ್ನು ತಯಾರು ಮಾಡಲು ಪ್ರಾರಂಭಿಸಲಾಗಿತ್ತು. 1990ರ ಏರೋನಾಟಿಕಲ್ ಡೆವಲಪ್ಮೆ೦ಟ್ ಏಜೆನ್ಸಿಯು ತೇಜಸ್ನ ವಿನ್ಯಾಸ ತಯಾರಿಸಿ ಎಚ್ಎಎಲ್ ಗೆ ಹಸ್ತಾ೦ತರಿಸಿತ್ತು. ಡಿಆರ್ಡಿಒ ಸ೦ಸ್ಥೆಯ ವಿಜ್ಞಾನಿಗಳು ದೇಶಿ ನಿಮಿ೯ತ ಇ೦ಜಿನ್ ನಿಮಿ೯ಸಿದ್ದರು. ಆದರೆ ಇ೦ಜಿನ್ನಲ್ಲಿ ಕೆಲ ದೋಷವಿದ್ದು, ಅದನ್ನು ಸರಿಪಡಿಸಲು ವಿಳ೦ಬವಾದ ಕಾರಣ ವಿಮಾನ ತಯಾರಿಕಾ ಯೋಜನೆಯೂ ತಡವಾಯಿತು. ಇದೀಗ ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿದ ನಂತರ ತೇಜಸ್ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.