ಜಿನಿವಾ: ಜಿನಿವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ವಿಟ್ಜರ್ಲ್ಯಾಂಡ್ ಅಧ್ಯಕ್ಷ ಜೋಹಾನ್ ಷ್ನೇಯ್ಡರ್ ಅಮ್ಮಾನ್ ಜೊತೆ ಮಾತುಕತೆ ನಡೆದಿದ್ದು, ಭಾರತದ ಎನ್ಎಸ್ಜಿ ಸದಸ್ಯತ್ವಕ್ಕೆ ಸ್ವಿಟ್ಜರ್ಲ್ಯಾಂಡ್ ಬೆಂಬಲ ವ್ಯಕ್ತಪಡಿಸಿದೆ. ಇದರ ಜೊತೆಗೆ ತೆರಿಗೆ ವಂಚನೆ ಮತ್ತು ಕಪ್ಪು ಹಣದ ಬಗ್ಗೆ ತಿಳಿದುಕೊಳ್ಳಲು ಸಹಕಾರ ಸೂಚಿಸಿದೆ.
ವ್ಯಾಪಾರ, ಹೂಡಿಕೆ, ವೃತ್ತಿಪರ ತರಬೇತಿಯ ಜೊತೆಗೆ ಸ್ವಿಸ್ ಬ್ಯಾಂಕ್ಗಳಲ್ಲಿರುವ ಭಾರತೀಯರ ಕಪ್ಪು ಹಣದ ಕಂಡುಹಿಡಿಯಲು ಸಹಕಾರ ವಿಸ್ತರಿಸುವುದು ಎರಡು ರಾಷ್ಟ್ರಗಳ ಮಾತುಕತೆಯ ಪ್ರಮುಖ ಕ್ಷೇತ್ರವಾಗಿತ್ತು.
ಎನ್ಎಸ್ಜಿ ಸದಸ್ಯತ್ವದ ಸಮಗ್ರ ಮಾತುಕತೆ ಸಭೆ ಜೂ.9ರಂದು ವಿಯೆನ್ನಾದಲ್ಲಿ ಹಾಗೂ ಜೂ.24ರಂದು ಸಿಯೋಲ್ನಲ್ಲಿ ನಡೆಯಲಿದ್ದು, ಎನ್ಎಸ್ಜಿ ಸದಸ್ಯತ್ವಕ್ಕೆ ಭಾರತ ಪ್ರಯತ್ನಿಸುತ್ತಿದ್ದು ಈ ಬಾರಿ ಸದಸ್ಯತ್ವ ಪಡೆಯುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಎನ್ಎಸ್ಜಿ ಸದಸ್ಯತ್ವದಲ್ಲಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ ಸ್ವಿಟ್ಜರ್ಲ್ಯಾಂಡ್ ಅಧ್ಯಕ್ಷರಿಗೆ ಧನ್ಯವಾದಗಳು. ತೆರಿಗೆ ವಂಚನೆ ಮತ್ತು ಕಪ್ಪು ಹಣದ ವಿರುದ್ಧ ಹೋರಾಟ ಎರಡು ರಾಷ್ಟ್ರಗಳಿಗೆ ’ಹಂಚಿಕೆಯ ಆದ್ಯತೆ’ಯ ವಿಚಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪರಮಾಣು ವಿನಿಮಯ ಒಪ್ಪಂದದಲ್ಲಿ ಆರಂಭಿಕ ಸಮಾಲೋಚನೆ ಬಹು ಮುಖ್ಯವಾದುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಎನ್ಎಸ್ಜಿ ಪರಮಾಣು ಸಂಬಂಧಿತ ಗಂಭೀರ ವಿಷಯಗಳನ್ನು ನಿಯಂತ್ರಿಸುತ್ತಿದ್ದು, ಭಾರತದ ಸದಸ್ಯತ್ವ ಅದರ ಪರಮಾಣು ಶಕ್ತಿ ವಿಸ್ತರಣೆಗೆ ಸಹಕಾರಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.