ನವದೆಹಲಿ: ಜಗತ್ತಿನಾದ್ಯಂತ ಕಾರುಗಳ ಸುರಕ್ಷತೆಯು ಒಂದು ಪ್ರಮುಖ ವಿಚಾರವಾಗಿದ್ದು, ಪ್ರತಿ ವರ್ಷ ಸುಮಾರು 1.5 ಲಕ್ಷ ಜನರು ಕಾರು ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಇತ್ತೀಚೆಗೆ ಭಾರತದ 5 ಪ್ರಮುಖ ಕಾರುಗಳ ಜಾಗತಿಕ ಎನ್ಸಿಎಪಿ ಕ್ರ್ಯಾಷ್ ಟೆಸ್ಟ್ ಪರೀಕ್ಷೆಯಲ್ಲಿ ವಿಫಲಹೊಂಡಿವೆ.
ಹೊಸ ರಸ್ತೆ ಸುರಕ್ಷತಾ ಮಸೂದೆ ತಯಾರಿಸಲಾಗಿದ್ದು, ಕಾರುಗಳ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಉಲ್ಲಂಘಿಸಿದಲ್ಲಿ ಕಾರು ತಯಾರಕರಿಗೆ ಸುಮಾರು 100 ಕೋಟಿ ದಂಡ ವಿಧಿಸಲಾಗುವುದು ಎನ್ನಲಾಗಿದೆ.
ಉದ್ದೇಶಿತ ದಂಡ ನಿಬಂಧನೆಗಳನ್ನು ರಾಜಸ್ಥಾನ ಸಾರಿಗೆ ಸಚಿವ ಯೂನುಸ್ ಖಾನ್ ನೇತೃತ್ವದ ರಾಜ್ಯ ರಸ್ತೆ ಸಾರಿಗೆ ಸಚಿವರ ತಂಡ ರಚಿಸಿ ಕೇಂದ್ರ ಸರ್ಕಾರಕ್ಕೆ ನೀಡಿದೆ. ಕಟ್ಟುನಿಟ್ಟಾದ ವಾಹನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ವಾಹನ ತಯಾರಕರು ಹಾಗೂ ಆಟೊಮೊಬೈಲ್ ಕಂಪೆನಿಗಳಿಗೆ 100 ಕೋಟಿ ವರೆಗೆ ದಂಡ ವಿಧಿಸಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಅಲ್ಲದೇ ಅನಧಿಕೃತ ವಾಹನ ಪರಿಕರಗಳು, ಅನೇಕ ನಿರ್ಮಾಣ ಅಥವಾ ನಿರ್ವಹಣೆ ಸಂಬಂಧಿತ ನಿಯಮ ಉಲ್ಲಂಘನೆಯಾದಲ್ಲಿ ವಾಹನ ಸುರಕ್ಷತೆ ಮಸೂದೆ ಅನ್ವಯವಾಗಲಿದ್ದು, ವಾಹನ ಮಾಲಕರು ಕೂಡ ರೂ.5000 ವರೆಗೆ ದಂಡ ಪಾವತಿಸಬೇಕಾಗುತ್ತದೆ.
ಮಸೂದೆ ನಿಯಮದಂತೆ ಅನುಮೋದನೆ ರಹಿತ ಸುರಕ್ಷತಾ ಉಪಕರಣಗಳ ಮಾರಾಟಕ್ಕೆ ವಿತರಕರು ಹಾಗೂ ವಾಹನಗಳ ಬಿಡಿ ಭಾಗಗಳ ತಯಾರಕರಿಗೆ ರೂ.1 ಲಕ್ಷ ವರೆಗೆ ದಂಡ ವಿಧಿಸಲಾಗುವುದು.
ಅಪ್ರಾಪ್ತ ವಯಸ್ಕರಿಂದ ವಾಹನ ಚಾಲನೆ, ವೇಗ ಮಿತಿ ಹಾಗೂ ಟ್ರಾಫಿಕ್ ಸಿಗ್ನಲ್ಗಗಳ ಉಲ್ಲಂಘನೆ, ವಾಹನ ಚಲಾವಣೆ ವೇಳೆ ಫೋನ್ ಬಳಕೆ ಮುಂತಾದ ನಿಯಮ ಉಲ್ಲಂಘನೆಯಾದಲ್ಲಿ ವಾಹನ ಮಾಲಕರು ಅಥವಾ ಪೋಷಕರು ಜವಾಬ್ದಾರರಾಗಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ದಂಡ ವಿಧಿಸಲಾಗುವುದು ಅಥವಾ 3 ವರ್ಷ ಜೈಲು ಶಿಕ್ಷೆ ಜೊತೆಗೆ 20,000 ರೂ. ವರೆಗೆ ದಂಡ, ವಾಹನದ ನೋಂದಣಿ ಪ್ರಮಾಣಪತ್ರ ರದ್ದುಗೊಳಿಸುವ ಇತ್ಯಾದಿ ಕ್ರಮ ಕೈಗೊಳ್ಳಲಾಗುವುದು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಈ ನಿಯಮ ಶೀಘ್ರದಲೇ ಜಾರಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.