ನವದೆಹಲಿ: ಅಕ್ರಮ ವಲಸಿಗರು ಎಂಬ ಧಾರ್ಮಿಕ ಆಪಾದನೆಯ ಭಯದಿಂದ ಭಾರತಕ್ಕೆ ಬಂದಿರುವ ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಹಿಂದೂಗಳಿಗೆ ಭಾರತದ ಪೌರತ್ವ ನೀಡಲು ಗೃಹ ಸಚಿವಾಲಯ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪೌರತ್ವ ಕಾಯಿದೆ 1955ರ ಕರಡು ತಿದ್ದುಪಡಿ ಮಾಡುವ ಮೂಲಕ ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತ ನಿರಾಶ್ರಿತ ಹಿಂದೂಗಳು ಭಾರತದಲ್ಲಿಯೇ ಉಳಿಯಲಿದ್ದು, ಭಾರತದ ಪೌರತ್ವ ಪಡೆಯಲಿದ್ದಾರೆ.
ಇದರಿಂದ ಪಾಕಿಸ್ಥಾನ ಮತ್ತು ಬಾಂಗ್ಲಾದೇಶಗಳಲ್ಲಿ ’ಎರಡನೇ ದರ್ಜೆಯ ಪ್ರಜೆಗಳು’ ಎಂದು ಪರಿಗಣಿಸಿ, ಧರ್ಮನಿಂದನೆಯಿಂದ ಹಿಂಸಾಚಾರಕ್ಕೆ ಒಳಗಾಗುತ್ತಿರುವ ಸುಮಾರು 2 ಲಕ್ಷ ಹಿಂದೂಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
ಒಂದೆಡೆ ಧಾರ್ಮಿಕ ಮತ್ತು ರಾಜಕೀಯ ಕಿರುಕುಳಗಳಿಂದ ತಪ್ಪಿಸಿಕೊಳ್ಳಲು ಆಶ್ರಯ ಬಯಸುವ ಹಾಗೂ ಆರ್ಥಿಕ ಕಾರಣಗಳಿಗಾಗಿ ವಲಸೆ ಹೋಗುತ್ತಿರುವವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಾಶ್ರಿತರೆಂದು ವ್ಯಾಖ್ಯಾನಿಸಲಾಗಿದೆ.
ಡಿ.31, 2014ರ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕಾರ, ನಿರಾಶ್ರಿತರು ಪೌರತ್ವ ಅರ್ಜಿಗೆ ಅರ್ಹತೆ ಪಡೆಯಲಿದ್ದಾರೆ. ಪೌರತ್ವ ಕಾಯ್ದೆಯ 2(1)(b) ವಿಭಾಗದ ಅಡಿಯಲ್ಲಿ ಇಂತಹ ನಾಗರಿಕರು ’ಅಕ್ರಮ ವಲಸಿಗರು’ ಎಂಬ ಹೆಸರಿನಿಂದ ವಿನಾಯಿತಿ ಪಡೆಯುವ ಅವಕಾಶ ಹೊಂದಲಿದ್ದಾರೆ.
ಭಾರತ ಸರ್ಕಾರ ಪಾಸ್ಪೋರ್ಟ್ ಕಾಯಿದೆ 1920 ಮತ್ತು ವಿದೇಶಿ ಕಾಯಿದೆ 1946 ತಿದ್ದುಪಡಿಗೆ ಪ್ರಯತ್ನಿಸುತ್ತಿದೆ. ಈ ತಿದ್ದುಪಡಿ ಅಧಿನಿಯಮ ಸಚಿವ ಸಂಪುಟದ ಅನುಮೋದನೆ ಪಡೆದಲ್ಲಿ ಹೊಸ ಕಾಯಿದೆ ಜಾರಿಗೆ ಬರಲಿದೆ ಎಂದು ಎಂಎಎಚ್ ಕಾರ್ಯನಿರ್ವಾಹಕರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.