ಒರಿಸ್ಸಾ : ಪೂರ್ವ ರಾಜ್ಯಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಮತ್ತು ಹೆಣ್ಣುಮಕ್ಕಳು ದೇಶದ ಹಿರಿಮೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಕೇಂದ್ರ ಸರಕಾರ ಎರಡು ವರ್ಷ ಪೂರೈಸಿದ ಸಂಬಂಧ ಓರಿಸ್ಸಾದಲ್ಲಿ ವಿಕಾಸ್ ಪರ್ವ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದುತ್ತಿದ್ದರು.
ಭಾರತದೆಲ್ಲೆಡೆ ಅಭಿವೃದ್ಧಿ ಹೊಂದಬೇಕು. ಬಡತನ ನಿರ್ಮೂಲನೆಗೆ ನಮ್ಮ ಸರಕಾರ ಬದ್ಧವಾಗಿದ್ದು , ಗ್ರಾಮಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಗುವಂತೆ ಮಾಡುವುದು ಮುಖ್ಯ. ಸ್ವಾತಂತ್ರ್ಯ ದೊರಕಿ ೬ ದಶಕಗಳು ಕಳೆದಿದ್ದರೂ ಕೆಲ ಹಳ್ಳಿಗಳಿಗೆ ವಿದ್ಯುತ್ ದೊರಕದಿರುವುದು ದುರಾದೃಷ್ಟ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳಾದ ಮಹಾರಾಷ್ಟ್ರ, ಗಜರಾತ್, ಹರಿಯಾಣ, ರಾಜಸ್ಥಾನ ಮುಂತಾದ ಪಶ್ಚಿಮ ಮತ್ತು ಮಧ್ಯ ಭಾರತದ ರಾಜ್ಯಗಳು ಬಿಹಾರ , ಒರಿಸ್ಸಾ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಿಗಿಂತ ಹೆಚ್ಚು ಅಭಿವೃದ್ಧಿ ಹೊಂದಿವೆ.
ಈ ಹಿಂದಿನ ಸರ್ಕಾರಗಳು ‘ನಾವು ನಿಮ್ಮನ್ನು ಆಳುವವರು ತಾವು ನಾಯಕರು ಎಂದು ಕಾರ್ಯ ನಿರ್ವಹಿಸುತ್ತಿದ್ದರು. ಬಡತನ ನಿರ್ಮೂಲನೆಯ ಬಗ್ಗೆ ಘೋಷಣೆಗಳನ್ನು ಕೂಗುತ್ತಿದ್ದವರು. ಹೀಗೆ ಕಾರ್ಯ ನಿರ್ವಹಿಸಿದ ಅವರು ದೇಶವನ್ನು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬುದು ನಮ್ಮ ಮುಂದಿದೆ.
ನಾವು ಬಡವರ ಅಭಿವೃದ್ಧಿಗಾಗಿ, ಬಡತನ ನಿರ್ಮೂಲನೆಗೆ ಮುಂದಾಗಿದ್ದು, ಇದಕ್ಕಾಗಿ ಜನ- ಧನ ಯೋಜನೆಯನ್ನು ಜಾರಿಗೆ ತರಲಾಗಿದೆ. ಬಡತನದಲ್ಲಿದ್ದವರು ವ್ಯಾಪಾರ ನಡೆಸಬೇಕು ಎಂದು ಮುಂದಾಗುವವರು ಹೆಚ್ಚಿನ ಬಡ್ಡಿಗೆ ಹಣವನ್ನು ಪಡೆದು ಗೋಳಾಡುವ ಸ್ಥಿತಿಯಿದೆ. ಇದನ್ನು ತಪ್ಪಿಸುವ ಸಲುವಾಗಿ ಮುದ್ರಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಹಲವು ಬಡಕುಟುಂಬಗಳು ೫೦ ಸಾವಿರ ರೂ. ಸಾಲ ಪಡೆದು ಸಣ್ಣ ಪುಟ್ಟ ವ್ಯಾಪಾರ ನಡೆಸುತ್ತಿದ್ದಾರೆ.
ಭಾರತದಲ್ಲಿ 25 ಕೋಟಿ ಕುಟುಂಬಗಳಲ್ಲಿ 3.5 ಕೋಟಿ ಕುಟುಂಬಗಳು ಬಡತನ ರೇಖೆಯಲ್ಲಿದ್ದು, ಅವರನ್ನು ಬಡತನ ರೇಖೆಯಿಂದ ಮೇಲೆತ್ತುವ ಯೋಜನೆ ರೂಪಿಸಲಾಗಿದೆ. 5 ಕೋಟಿ ಜನರಿಗೆ ಪೆಹಲ್ ಮೂಲಕ ಗ್ಯಾಸ್ ಒದಗಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿ ಕಟ್ಟಿಗೆ ಮುಕ್ತ ಅಡುಗೆ ಮನೆ ರೂಪಿಸುವ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದಿನ ಸರಕಾರ ತಾವು ಎನು ಮಾಡಿದ್ದೇನೆಂದು ಅಂಕಿ-ಅಂಶ ಸಹಿತ ಲೆಕ್ಕಾಚಾರ ನೀಡಿರಲಿಲ್ಲ. ಆದರೆ ನಾನು ನಿಮಗೆ ಲೆಕ್ಕಾಚಾರ ಕೊಡಲು ನಿಮ್ಮ ನಡುವೆ ಬಂದಿದ್ದೇನೆ. ಭಾರತ ವಿಕಾಸದತ್ತ ಸಾಗಬೇಕು, ವಿಕಾಸ ಎಂದರೆ ಬಿಜೆಪಿ, ಬಿಜೆಪಿ ಎಂದರೆ ವಿಕಾಸ ಅದಕ್ಕಾಗಿ ವಿಕಾಸಕ್ಕೆ ನಿಮ್ಮ ಬೆಂಬಲ ನೀಡಿ. ಈಗ ಯಾವುದೇ ಚುನಾವಣೆ ಇಲ್ಲದಿದ್ದರೂ ನೀವು ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದೀರಿ. ನಿಮ್ಮ ಪ್ರೀತಿಗೆ ನಿಮ್ಮ ಪ್ರಧಾನ ಸೇವಕನ ಧನ್ಯವಾದಗಳು ಎಂದು ಮೋದಿ ನೆರೆದ ಬೃಹತ್ ಜನಸ್ತೋಮಕ್ಕೆ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.