ನವದೆಹಲಿ: ಅಧಿವೇಶನದ ಅವಧಿಯಲ್ಲಿ ರಾಜ್ಯ ಸಭೆಯ ಹಾಲಿ ಸದಸ್ಯರು ಮೃತಪಟ್ಟಲ್ಲಿ ಅಂದಿನ ಅಧಿವೇಶನವನ್ನು ಮುಂದೂಡಲಾಗುವುದಿಲ್ಲ ಎಂದು ರಾಜ್ಯ ಸಭೆ ತೀರ್ಮಾನಿಸಿದೆ.
ಅಧಿವೇಶನದ ವೇಳೆ ಯಾವುದೇ ಸಂದರ್ಭದಲ್ಲಿ ಸದಸ್ಯರು ಮೃತಪಟ್ಟರೂ ಅಂದಿನ ಅಧಿವೇಶನದ ವಿಚಾರಣೆ ಮುಂದುವರೆಯಲಿದೆ.
ಈವರೆಗೆ ಇದ್ದ ನಿಯಮದಂತೆ ಅಧಿವೇಶನ ಮುಂದೂಡುವ ಬದಲು ಅಗಲಿದವರ ನೆನಪಿಗಾಗಿ ಒಂದು ಗಂಟೆ ಕಾಲ ಮೌನಾಚರಣೆ, ಸಂತಾಪ ಸಲ್ಲಿಸಿದ ಬಳಿಕ ಅಗತ್ಯ ಸಂದರ್ಭದಲ್ಲಿ ಮುಂದೂಡಬಹುದು ಎಂದು ಹೇಳಿದೆ.
ಈ ಬಗ್ಗೆ ಮೇ 3ರಂದು ಚರ್ಚಿ ನಡೆಸಲಾಗಿದ್ದು, ರಾಜ್ಯಸಭಾ ಅದ್ಯಕ್ಷ ಹಮೀದ್ ಅನ್ಸಾರಿ ಅವರು ಸಾಮಾನ್ಯ ಉದ್ದೇಶಗಳ ಸಮಿತಿ (ಜೆಪಿಸಿ)ಯ ಶಿಫಾರಸ್ಸಿಗೆ ಅನುಮತಿ ನೀಡಿದ್ದಾರೆ ಎಂದು ರಾಜ್ಯಸಭೆ ತಿಳಿಸಿದೆ.
ಪರಿಷ್ಕೃತ ನಿಯಮದ ಪ್ರಕಾರ ಅಗಲಿದ ಸಚಿವರು ರಾಜ್ಯಸಭಾ ಸದಸ್ಯರಲ್ಲದೇ ಇದ್ದು ಹಾಗೂ ದೆಹಲಿಯಲ್ಲಿ ಮೃತಪಟ್ಟಲ್ಲಿ ಮಾತ್ರ ಸದಸ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅಧಿವೇಶನ ಮುಂದೂಡಲಾಗುವುದು.
ಅಲ್ಲದೇ ಓರ್ವ ರಾಷ್ಟ್ರ ರಾಜಕೀಯ ಪಕ್ಷದ ನಾಯಕ ಮೃತಪಟ್ಟಿದ್ದು, ಅವರು ಲೋಕಸಭೆಯ ಹಾಲಿ ಸದಸ್ಯರಾಗಿದ್ದಲ್ಲಿ ಅಥವಾ ಅವರು ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿದ್ದರೆ ಅಥವಾ ರಾಜ್ಯಸಭಾ ಅಧ್ಯಕ್ಷರು ಅವರನ್ನು ಪಕ್ಷವಾಗಿ ಗುರುತಿಸಿದಲ್ಲಿ ಮಾತ್ರ ಅಧಿವೇಶನ ಮುಂಡೂಲಾಗುವುದು ಎಂದು ರಾಜ್ಯಸಭೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.