ನವದೆಹಲಿ: ದೆಹಲಿಯ ೩ ತ್ಯಾಜ್ಯ ಶೇಖರಣೆ ಪ್ರದೇಶಗಳ ಪೈಕಿ ಎರಡು ಪ್ರದೇಶಗಳಲ್ಲಿ ಬೆಂಕಿ ಆವರಿಸಿ ವಿಷಕಾರಿ ಹೊಗೆ ಎದ್ದಿದ್ದು, ವಾಯು ಮಾಲಿನ್ಯ ತಡೆಗೆ ಅರವಿಂದ ಕೇಜ್ರಿವಾಲ್ ಸರ್ಕಾರದ ಸಮ-ಬೆಸ ನಿಯಮ ಪ್ರಯೋಗಕ್ಕೆ ಅಡ್ಡಿ ಉಂಟುಮಾಡಿದೆ.
ದೆಹಲಿಯ ಅತಿ ದೊಡ್ಡ ತ್ಯಾಜ್ಯ ಶೇಖರಣೆ ಪ್ರದೇಶವಾಗಿರುವ ಭಾಲಾಸ್ವಾದ 40 ಎಕರೆ ಪ್ರದೇಶದಲ್ಲಿ ಕಳೆದ 20 ದಿನಗಳಿಂದ ಬಾನಿನೆತ್ತರಕ್ಕೆ ಪರ್ವತದಂತೆ ಹೊಗೆ ಕಾಣಿಸಿಕೊಳ್ಳುತ್ತಿದೆ. ಓಖ್ಲಾ ನಗರದ ತ್ಯಾಜ್ಯ ಶೇಖರಣಾ ಪ್ರದೇಶದಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳವನ್ನು ಕರೆಸಲಾಗಿದೆ ಎಂದು ಹಸಿರು ನ್ಯಾಯಾಲಯ ತಿಳಿಸಿದೆ.
ಸಾರ್ವಜನಿಕರಿಂದ ಹಲವು ದೂರುಗಳು ಪಡೆದ ಹಿನ್ನೆಲೆಯಲ್ಲಿ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ನಾಗರಿಕ ಸೇವಾ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಶೇಖರಣೆಗೊಂಡ ತ್ಯಾಜ್ಯವು ಮಿಥೇನ್ ಅನಿಲವಾಗಿ ಪರಿವರ್ತನೆಗೊಂಡು ಬೆಂಕಿ ಉದ್ಭವಿಸಿದೆ ಎಂದು ನಗರಪಾಲಿಕೆ ತಿಳಿಸಿರುವುದಾಗಿ ನ್ಯಾಯಾಲಯ ಹೇಳಿದೆ.
ಭಾಲಾಸ್ವಾದಲ್ಲಿ ಪ್ರದೇಶದಲ್ಲಿ ಕಳೆದ 10 ವರ್ಷಗಳ ಹಿಂದೆ ತ್ಯಾಜ್ಯ ಶೇಖರಣೆಯನ್ನು ನಿಲ್ಲಿಸಲಾಗಿದ್ದರೂ, ದೆಹಲಿಯ ಶೇ.50 ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ಇಂದಿಗೂ ಪ್ರತಿನಿತ್ಯ 2,700 ಟನ್ಗಳಷ್ಟು ತ್ಯಾಜ್ಯವನ್ನು ಎಸೆಯಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.