ಲಕ್ನೋ: 2002ರ ದಂಗೆ ಬಳಿಕ ನರೇಂದ್ರ ಮೋದಿ ಮುಸ್ಲಿಮ್ ಧರ್ಮಿಯರ ಶತ್ರುವಾದರು, ಆದರೆ 147 ದಂಗೆ ಬಳಿಕವೂ ಮುಲಾಯಂ ಸಿಂಗ್ ಯಾದವ್ ಹೇಗೆ ಇನ್ನೂ ’ನಾಯಕ’ರಾಗಿಯೇ ಉಳಿದಿದ್ದಾರೆ ಎಂದು ರಾಷ್ಟ್ರೀಯ ಉಲಾಮಾ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ಅಮಿರ್ ರಶೀದ್ ಪ್ರಶ್ನಿಸಿದ್ದಾರೆ.
ಮುಸ್ಲಿಂರನ್ನು ವೋಟ್ ಬ್ಯಾಂಕ್ ಆಗಿ ನೋಡುತ್ತಿರುವ ಮುಲಾಯಂ ಮತ್ತು ಅವರ ಪುತ್ರ ಹಾಗೂ ಸಿಎಂ ಅಖಿಲೇಶ್ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಅವರು, ಇವರಿಬ್ಬರ ಆಡಳಿತದಲ್ಲಿ ಉತ್ತರಪ್ರದೇಶದಲ್ಲಿ 147 ದಂಗೆಗಳಾಗಿವೆ. ಆದರೂ ಇವರು ನಾಯಕರು, ಉದ್ಧಾರಕರು ಆಗಿ ಉಳಿದದ್ದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಕೋಮುವಾದಿ ಮತ್ತು ಜಾತ್ಯಾತೀತವಾದದ ಹೆಸರಲ್ಲಿ ರಾಜಕೀಯ ಪಕ್ಷಗಳು ಮುಸ್ಲಿಮರಿಗೆ ದ್ರೋಹವೆಸಗುತ್ತಿದೆ, ಕೆಲವರು ಬಿಜೆಪಿಯ ಹೆಸರು ಹೇಳಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೌಲಾನಾ ಆರೋಪಿಸಿದ್ದಾರೆ.
ಮುಸ್ಲಿಮರು, ಬ್ರಾಹ್ಮಣರು, ಭುಮಿಹಾರ್ ಮತ್ತು ರಾಜಪೂತರು ಒಟ್ಟಾದರೆ ಒಂದು ಶಕ್ತಿಶಾಲಿ ಪಡೆಯೇ ಆಗುತ್ತದೆ, ಇದರಿಂದ ಯಾದವರನ್ನು ಸುಲಭವಾಗಿ ಸೋಲಿಸಬಹುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.