ನವದೆಹಲಿ: ಪಾಕಿಸ್ಥಾನದ ಲಾಹೋರ್ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಭಾರತೀಯ ಪ್ರಜೆ ಕೃಪಾಲ್ ಸಿಂಗ್ ಅವರ ಕುಟುಂಬ ಸದಸ್ಯರು ಶುಕ್ರವಾರ ದೆಹಲಿಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ.
ಕೃಪಾಲ್ ಅವರ ಶವವನ್ನು ತಂದು, ಭಾರತದಲ್ಲೇ ಮರಣೋತ್ತರ ಪರೀಕ್ಷೆಯನ್ನು ನಡೆಸುವಂತೆ ಅವರು ಸಚಿವರಿಗೆ ಮನವಿ ಮಾಡಲಿದ್ದಾರೆ. ಕೃಪಾಲ್ ಕುಟುಂಬ ಸದಸ್ಯರಿಗೆ ಈ ಹಿಂದೆ ಪಾಕ್ ಜೈಲಿನಲ್ಲಿ ಮೃತರಾದ ಸರಬ್ಜೀತ್ ಸಿಂಗ್ ಅವರ ಸಹೋದರಿ ದಲ್ಬೀರ್ ಸಾಥ್ ನೀಡಲಿದ್ದಾರೆ.
ಕೃಪಾಲ್ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ಪಾಕಿಸ್ಥಾನ ಹೇಳಿದೆ, ಆದರೆ ಅವರ ಕುಟುಂಬ ಸದಸ್ಯರು ಇದನ್ನು ನಿರಾಕರಿಸಿದ್ದಾರೆ, ಭಾರತದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹೃದಯಾಘಾತದಿಂದ ಮೃತರಾದರು ಎಂದು ನಾವು ಹೇಗೆ ನಂಬುವುದು? ಅವರ ಶವವನ್ನು ನಮಗೆ ಕಳುಹಿಸಿಕೊಡಿ, ಮರಣೋತ್ತ ಪರೀಕ್ಷೆ ಇಲ್ಲಿ ನಡೆಸಿ. ಆಗ ಮಾತ್ರ ನಮಗೆ ಸತ್ಯ ತಿಳಿಯುತ್ತದೆ ಎಂದು ಕೃಪಾಲ್ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.