ನವದೆಹಲಿ: ಈ ಬಾರಿ ಬೇಸಿಗೆಯ ಧಗೆ ಅತಿ ಹೆಚ್ಚಿದ್ದು, ಭಾರತದ 91 ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ 37.91 ಬಿಲಿಯನ್ ಕ್ಯೂಸೆಕ್ಸ್ಗೆ ಇಳಿದಿದೆ. ಇದು ಜಲಾಶಯಗಳ ಒಟ್ಟು ಶೇಖರಣಾ ಸಾಮರ್ಥ್ಯದ ಶೇ.24ರಷ್ಟೇ ಆಗಿದೆ.
ಜಲ ಆಯೋಗ ತನ್ನ ಇತ್ತೀಚೆಗಿನ ವರದಿಯಲ್ಲಿ ಎ.೭ರ ವರೆಗೆ ಈ ಜಲಾಶಯಗಳ ನೀರಿನ ಸಂಗ್ರಹ ಪ್ರಮಾಣ ಕಳೆದ ವರ್ಷದ ಅವಧಿಗಿಂತ ಕಡಿಮೆಯಾಗಿದೆ ಎಂದು ಹೇಳಿದೆ. ಜೂನ್ನಿಂದ ಸೆಪ್ಟೆಂಬರ್ವರೆಗೆ ಈ ಜಲಾಶಯಗಳು ಸಾಮಾನ್ಯವಾಗಿ ನೀರು ತುಂಬಿ ಹರಿಯುತ್ತವೆ. ಕಳೆದ 2014-15ರಲ್ಲಿ ಮುಂಗಾರಿನ ಕೊರತರೆಯಿಂದಾಗಿ ಈ ಜಲಾಶಯಗಳ ನೀರಿನ ಪ್ರಮಾಣ ಕಡಿಯಾಗಿದೆ. ಈ ಜಲಾಶಯಗಳ ನೀರನ್ನು ಕೃಷಿ ಕಾರ್ಯಗಳಿಗೆ ಬಳಸಲಾಗುತ್ತಿದೆ.
ಭಾರತೀಯ ಹವಾಮಾನ ಇಲಾಖೆ ಈ ಬಾರಿ ಅತಿಹೆಚ್ಚು ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಅಂದಾಜಿಸಿದ್ದು, ಜೂನ್ನಿಂದ ಸೆಪ್ಟೆಂಬರ್ ನಡುವೆ ಜಲಾಶಯಗಳಲ್ಲಿ ಅತ್ಯಧಿಕ ಮಟ್ಟದಲ್ಲಿ ನೀರು ತುಂಬಿ ಹರಿಯಲಿದೆ ಎಂದು ನಿರೀಕ್ಷಿಸಲಾಗಿದೆ.
ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಜಾಖಂಡ್, ಕರ್ನಾಟಕ, ಕೇರಳ, ಬಂಗಾಳ, ತೆಲಂಗಾಣ, ರಾಜಸ್ಥಾನ ಮುಂತಾದ ರಾಜ್ಯಗಳ ಜಲಾಶಯಗಳ ನೀರಿನ ಮಟ್ಟ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ.
ಆಂಧ್ರ ಪ್ರದೇಶ ಮತ್ತು ತ್ರಿಪುರ ರಾಜ್ಯಗಳ ಜಲಾಶಯಗಳ ನೀರಿನ ಮಟ್ಟ ಮಾತ್ರ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಸ್ಥಿತಿ ಕಂಡಿದೆ.
ಈ 91 ಜಲಾಶಯಗಳ ಒಟ್ಟು ಶೇಖರಣಾ ಸಾಮರ್ಥ್ಯ 157 ಬಿಸಿಎಂ ಆಗಿದ್ದು, ಇದು ದೇಶದಲ್ಲಿ ಇರುವ ಜಲಾಶಯಗಳ 253 ಬಿಲಿಯನ್ ಕ್ಯೂಸೆಕ್ಸ್ ಶೇಖರಣಾ ಸಾಮರ್ಥ್ಯದ ಶೇ.62ರಷ್ಟಿದೆ. 91 ಜಲಾಶಯಗಳ ಪೈಕಿ 37 ಜಲಾಶಯಗಳು 60 ಮೆಗಾ ವ್ಯಾಟ್ಗೂ ಹೆಚ್ಚು ಸಾಮರ್ಥ್ಯದ ಅಳವಡಿಕೆಯ ಹೈಡ್ರೋ ವಿದ್ಯುತ್ ಉತ್ಪಾದನೆಯ ಲಾಭ ಪಡೆದುಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.