ತ್ರಿಶೂರ್ : ಕೊಲ್ಲಂ ದೇಗುಲದಲ್ಲಿ ಪಟಾಕಿ ದುರಂತ ಸಂಭವಿಸಿದ ಹಿನ್ನಲೆಯಲ್ಲಿ ವಿಶ್ವ ಪ್ರಸಿದ್ಧ ತ್ರಿಶೂರ್ ಪೂರಮ್ ಉತ್ಸವಕ್ಕೂ ಕತ್ತಲು ಕವಿಯುವ ಸೂಚನೆಗಳು ಕಾಣುತ್ತಿವೆ. ತ್ರಿಶೂರ್ ಪೂರಮ್ ಆನೆಗಳ ವೈಭವೋಪೇತ ಮೆರವಣಿಗೆ ಮತ್ತು ಪಟಾಕಿಗಳ ವರ್ಣರಂಜಿತ ಚಿತ್ತಾರಕ್ಕೆ ಖ್ಯಾತಿಯಾಗಿದೆ.
ಕೇರಳ ಹೈಕೋರ್ಟ್ ರಾತ್ರಿ ವೇಳೆಯಲ್ಲಿ ಶ್ರದ್ಧಾ ಕೇಂದ್ರಗಳ ಸಮೀಪ ಹೆಚ್ಚು ಶಬ್ದದ ಪಟಾಕಿಗಳನ್ನು ಸುಡುವುದಕ್ಕೆ ನಿಷೇಧ ಹೇರಿದೆ, ಹೀಗಾಗಿ ತ್ರಿಶೂರ್ನ ಅದ್ಧೂರಿ ಜಾತ್ರೆ ಈ ವರ್ಷ ಕಳೆಗುಂದಬಹುದು ಎಂಬ ಅತಂಕ ಆಯೋಜಕರಲ್ಲಿದೆ.
ಸಿಎಂ ಕಛೇರಿ ತ್ರಿಶೂರ್ ಉತ್ಸವವನ್ನು ಸದ್ಯಕ್ಕೆ ನಡೆಸದಂತೆ ನಮಗೆ ಆದೇಶಿಸಿದೆ ಎಂದು ಆಯೋಜಕರು ಹೇಳಿದ್ದಾರೆ. ಇದೀಗ ಉತ್ಸವ ನಡೆಸುವುದೇ ಬೇಡವೇ ಎಂಬ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಆಯೋಜಕರು ಹೇಳಿದ್ದಾರೆ.
ಪಟಾಕಿ ಸುಡಲು ಅವಕಾಶವಿಲ್ಲವೆಂದಾದರೆ ಈ ರಾಷ್ಟ್ರೀಯ ಹಬ್ಬವನ್ನು ಆಯೋಜನೆ ಮಾಡುವುದನ್ನೇ ತಡೆ ಹಿಡಿಯುತ್ತೇವೆ, ಯಾವುದೇ ರಿಸ್ಕ್ನ್ನು ನಾವು ತೆಗೆದುಕೊಳ್ಳುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.