ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಎಪ್ರಿಲ್ 14 ರಂದು ಗ್ರಾಮ ಸ್ವಯಂ ಆಡಳಿತ ಅಭಿಯಾನ ‘ಗ್ರಾಮ ಉದಯ್ ಸೇ ಭಾರತ್ ಉದಯ್’ ಗ್ರಾಮೋದಯದಿಂದ ಭಾರತದ ಉದಯ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮದಿನೋತ್ಸವದಂದು ಮಧ್ಯಪ್ರದೇಶದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದು, 11 ದಿನಗಳ ಕಾಲ ಇದು ಮುಂದುವರೆಯಲಿದೆ. ಈ ಅಭಿಯಾನ ಎಪ್ರಿಲ್ 24 ಪಂಚಾಯತ್ ರಾಜ್ ದಿನದಂದು ಸಮಾರೋಪಗೊಳ್ಳಲಿದೆ.
ರಾಷ್ಟ್ರೀಯ ಕಾರ್ಯಕ್ರಮದಂಗವಾಗಿ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮಗಳನ್ನು ಏಪ್ರಿಲ್ 14 ರಂದು ಮಧ್ಯಪ್ರದೇಶದ ಮೌವ್ನಲ್ಲಿ ಏರ್ಪಡಿಸಲಾಗಿದೆ.
5 ನೇ ಗೊತ್ತುಪಡಿಸಿದ ವಿಭಾಗದಿಂದ ಬುಡಕಟ್ಟು ಮಹಿಳಾ ಗ್ರಾಮ ಪಂಚಾಯತ್ ಅಧ್ಯಕ್ಷರ ರಾಷ್ಟ್ರೀಯ ಕಾರ್ಯಕಾರಿಣಿ ಏಪ್ರಿಲ್ 19 ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆಯುತ್ತದೆ.
ಏಪ್ರಿಲ್ 24 ರಂದು ಜಾರ್ಖಂಡ್ನ ಜಮ್ಶೆಡ್ಪುರದಲ್ಲಿ ಪಂಚಾಯತ್ ಪ್ರತಿನಿಧಿಗಳ ವಿಚಾರ ಸಂಕಿರಣ ನಡೆಯಲಿದ್ದು, ಪ್ರಧಾನಿ ಮೋದಿ ಮಾತನಾಡಲಿದ್ದಾರೆ.
ಪಂಚಾಯತ್ ಕಾರ್ಯಕ್ರಮಗಳಲ್ಲಿ ಏಪ್ರಿಲ್ 14 ರಿಂದ 16 ರ ವರೆಗೆ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್ 17 ರಿಂದ 20 ರವರೆಗೆ ಗ್ರಾಮ ರೈತರ ಸಭೆ ನಡೆಯುತ್ತವೆ.
ಏಪ್ರಿಲ್ 21 ರಿಂದ 24 ರವರೆಗೆ ಗ್ರಾಮ ಸಭೆ ನಡೆಯಲಿರುವುದು.
ಏಪ್ರಿಲ್ 24 ರಂದು ಮಧ್ಯಾಹ್ನ 3 ಕ್ಕೆ ಜಾರ್ಖಂಡ್ನ ಜಮ್ಶೆಡ್ಪುರದಲ್ಲಿ ಎಲ್ಲಾ ಗ್ರಾಮ ಸಭೆಯ ಸದಸ್ಯರನ್ನುದ್ದೇಶಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.
14 ನೇ ಹಣಕಾಸು ಆಯೋಗದಿಂದ ಶಿಫಾರಿಸಲ್ಪಟ್ಟ ಅಂದಾಜು 2.5 ಲಕ್ಷ ಗ್ರಾಮ ಪಂಚಾಯತ್ಗಳಿಗೆ ರೂ. 2,00,292 ಕೋಟಿ ಹಣವನ್ನು ಮುಂದಿನ 5 ವರ್ಷಗಳ ಅವಧಿಗೆ ಹಿಂದಿನ ಹಣಕಾಸು ಆಯೋಗ ನಿಗದಿಪಡಿಸಿದ್ದಕ್ಕಿಂತ ಮೂರೂವರೆ ಪಟ್ಟು ಹೆಚ್ಚಿನ ಅನುದಾನವನ್ನು ಹಣಕಾಸು ಆಯೋಗ ಈ ಬಾರಿ ನೀಡಿದೆ. ಯೋಜನೆಗಳನ್ನು ಎಲ್ಲಾ ಯುವ, ಹಿರಿಯ ಹಾಗೂ ಮಹಿಳೆಯರು ಹಾಗೂ ವಿಕಲಚೇತನರುಗಳೆಲ್ಲರೂ ಭಾಗವಹಿಸುವುದರೊಂದಿಗೆ ಎಂ.ಜಿ.ಎನ್. ಆರ್.ಇ.ಜಿ.ಎಸ್., ಅನುದಾನದೊಂದಿಗೆ ಗ್ರಾಮ ಪಂಚಾಯತ್ ಈ ಅನುದಾನವನ್ನು ಬಳಸಲಿದೆ.
ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಬಗ್ಗೆ ಗ್ರಾಮೀಣ ಜನತೆಯಲ್ಲಿ ಅರಿವು ಮೂಡಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಗ್ರಾಮೀಣ ಅಭಿವೃದ್ಧಿ, ಗ್ರಾಮೀಣ ಭಾಗದಲ್ಲಿ ಸಾಮರಸ್ಯ, ಪಂಚಾಯತ್ ರಾಜ್ನ್ನು ಬಲಗೊಳಿಸುವುದು, ರೈತರ ಕಲ್ಯಾಣ, ಬಡವರ ಜೀವನ ಸುಧಾರಣೆ ಮುಂತಾದುವುಗಳನ್ನು ಸಾಧಿಸಲು ಈ ಅಭಿಯಾನ ಸಹಾಯಕವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.