ನವದೆಹಲಿ: ಸಾಲ ವಂಚಕರ ಪಟ್ಟಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಆರ್ಬಿಐ ವಿರುದ್ಧ ಸುಪ್ರೀಂಕೋರ್ಟ್ ಗರಂ ಆಗಿದ್ದು, ದೊಡ್ಡ ದೊಡ್ಡ ವಂಚಕರು ತಪ್ಪಿಸಿಕೊಳ್ಳುತ್ತಿರುವಾಗ ರೈತರನ್ನು ಹಿಡಿದು ದೌರ್ಜನ್ಯವೆಸಗಲಾಗುತ್ತಿದೆ ಎಂದಿದೆ.
’ನೀವು ಹಣದ ವ್ಯವಹಾರಗಳನ್ನು ಸೂಕ್ಷ್ಮವಾಗಿ ಗಮನಿಸಿ, ಎಡವಿದರೆ ಎಚ್ಚರಿಕೆ ಕೊಡಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ಇದಕ್ಕೆ ಬೇಕಾದ ನೀತಿ ನಿಯಮಗಳನ್ನು ರೂಪಿಸಿ ನಿಯಂತ್ರಣ ಮಾಡಬೇಕಾದವರೂ ನೀವೇ. ಆದರೂ ಒಂದು ಬದಿಯಲ್ಲಿ ಜನ ಕೋಟ್ಯಾಂತರ ಹಣ ಪಡೆದು ದೊಡ್ಡ ದೊಡ್ಡ ಸಾಮ್ರಾಜ್ಯವನ್ನು ನಡೆಸುತ್ತಿದ್ದಾರೆ, ಬಳಿಕ ಸಾಲ ಹಿಂದಿರುಗಿಸದೆ ಹೋಗುತ್ತಾರೆ. ಅಲ್ಲಿಗೆ ವಿಷಯ ಮುಗಿಯುತ್ತದೆ. ಇನ್ನೊಂದು ಕಡೆ ರೈತರು ಕೆಲವೇ ಸಾವಿರ ಸಾಲ ಪಡೆಯುತ್ತಾರೆ, ಸಾಲವನ್ನು ಸಂದಾಯ ಮಾಡಲು ಅವರಿಗೆ ಸಾಧ್ಯವಾಗದೇ ಹೋದರೆ ಅವರ ಆಸ್ತಿಯನ್ನೇ ವಶಪಡಿಸಿಕೊಳ್ಳಲಾಗುತ್ತದೆ’ ಎಂದು ಸುಪ್ರೀಂ ಆರ್ಬಿಐಗೆ ಹೇಳಿದೆ.
ಸಾಲ ಸಂದಾಯ ಮಾಡದವರ ಪಟ್ಟಿಯನ್ನು ಬಿಡುಗಡೆ ಮಾಡಿದರೆ ಅದು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಆರ್ಬಿಐ ಸುಪ್ರೀಂಕೋರ್ಟ್ಗೆ ಹೇಳಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.