News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೇರಳ ಚುನಾವಣೆಯಲ್ಲಿ ಈ ಬಾರಿ ಸೆಲೆಬ್ರಿಟಿಗಳ ಕಲರವ

kerala

ತಿರುವನಂತಪುರಂ: ಈ ಬಾರಿಯ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಸೆಲೆಬ್ರಿಟಿಗಳು ಕಣಕ್ಕಿಳಿಯಲಿದ್ದಾರೆ, ಈ ಮೂಲಕ ದೇವರ ಸ್ವಂತ ನಾಡಿನ ಚುನಾವಣಾ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ.

ಹಲವಾರು ಸಿನಿಮಾ ತಾರೆಯರು, ಕ್ರಿಡಾಪಟುಗಳು ಇದೇ ಮೊದಲ ಬಾರಿಗೆ ಇಲ್ಲಿ ಚುನಾವಣಾ ಕಣಕ್ಕಿಳಿದಿದ್ದಾರೆ. ಅದರಲ್ಲಿ ಪ್ರಮುಖರೆಂದರೆ ಕ್ರಿಕೆಟಿಗ ಎಸ್.ಶ್ರೀಶಾಂತ್. ಇವರನ್ನು ಬಿಜೆಪಿ ತಿರುಪುನಿತ್ರ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ.

90 ರ ದಶಕದಲ್ಲಿ ಹೆಸರು ಮಾಡಿದ ನಾಳ್ವರು ನಟರು ಹರಿಹರ್ ನಗರದಲ್ಲಿ ವಿವಿಧ ಪಕ್ಷಗಳಿಂದ ಕಣಕ್ಕಿಳಿದಿದ್ದಾರೆ.

ನಟ ಮುಕೇಶ್ ಅವರು ಸಿಪಿಎಂನಿಂದ, ಜಗದೀಶ್ ಅವರು ಕಾಂಗ್ರೆಸ್‌ನಿಂದ, ನಟ ಸಿದ್ದಿಕಿ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.

ಅಶೋಕನ್ ಅವರೂ ಸಿಪಿಐನಿಂದ ಸ್ಪರ್ಧೆಗಿಳಿಯುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಕೆಪಿಎಸಿ ಲಲಿತ ಅವರು ಸಿಪಿಎಂನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.

ತಮಿಳುನಾಡು, ಆಂಧ್ರಪ್ರದೇಶದಂತೆ ಸೆಲೆಬ್ರಿಟಿಗಳು ರಾಜಕೀಯಕ್ಕೆ ಧುಮುಕುವ ಸಂಪ್ರದಾಯ ಕೇರಳದಲ್ಲಿರಲಿಲ್ಲ, ಆದರೆ ಈ ಬಾರಿ ಅಲ್ಲೂ ಬದಲಾವಣೆ ಕಾಣಿಸಿಕೊಳ್ಳುತ್ತಿದೆ. ಅಲ್ಲಿ ಜನ ಸೆಲೆಬ್ರಿಟಿಗಳಿಗೆ ಅಷ್ಟಾಗಿ ಮಣೆ ಹಾಕುವವರಲ್ಲ, ಆದರೂ ಒಂದು ಬಾರಿ ಅದೃಷ್ಟ ಪರೀಕ್ಷಿಸಿಕೊಳ್ಳುವ ಆಸೆ ಸೆಲೆಬ್ರಿಟಿಗಳದ್ದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top