ಮಂಗಳೂರು : ನಗರದ ಉರ್ವಸ್ಟೋರ್ ಮೈದಾನದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ, ದ.ಕ. ಜಿಲ್ಲಾಡಳಿತದ ಸಹಕಾರದೊಂದಿಗೆ ಕನ್ನಡ ನುಡಿ ಹಬ್ಬವನ್ನು ಆಯೋಜಿಸಲಾಗಿತ್ತು.
ಸಮಾರಂಭವನ್ನು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಕಲ್ಕುರ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಜಿಲ್ಲೆ ಬಹು ಭಾಷೆಗಳ ನಾಡು ಇಲ್ಲಿ ಕೊಂಕಣಿ, ತುಳು ಮತ್ತು ಬ್ಯಾರಿ ಭಾಷೆ, ಹಲವರ ಮನೆ ಮಾತು. ಆದರೂ ನಾವು ಕನ್ನಡಕ್ಕೆ ವಿಶೇಷ ಗೌರವ ನೀಡುತ್ತೇವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಕನ್ನಡಿಗ ಸರ್ವ ತಂತ್ರ ಸ್ವತಂತ್ರ ಪ್ರಜೆ ನಾಡಿನ ಸರ್ಕಾರ ಕನ್ನಡವನ್ನು ಸರ್ವಾಂಗಗಳಲ್ಲಿ ಅನುಷ್ಠಾನಕ್ಕೆ ತರಲು ಸರ್ವ ಪ್ರಯತ್ನ ಮಾಡಿದೆ ಈ ನಿಟ್ಟಿನಲ್ಲಿ ಆಗಿರುವ ಕೆಲಸಕ್ಕಿಂತ ಆಗಬೇಕಾಗಿರುವ ಕೆಲಸಗಳು ಸಾಕಷ್ಠಿವೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದಿರುವ ಕನ್ನಡವನ್ನು ಬೆಳೆಸುವ ಕೈಂಕರ್ಯಕ್ಕೆ ಎಲ್ಲಾ ಕನ್ನಡಿಗರು ಮನಸ್ಸು ಮಾಡಬೇಕು. ಅದು ಇಂದಿನ ಅಗತ್ಯ. ಕನ್ನಡಿಗರಲ್ಲಿ ಯಥೇಚ್ಚವಾಗಿ ತಂತ್ರಜ್ಞರು ಲಭ್ಯವಿರುವಾಗ ಅವರನ್ನು ಬಳಸಿಕೊಂಡು ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸುವಲ್ಲಿ ಕನ್ನಡವನ್ನು ಮುಂಚೂಣಿಯ ಭಾಷೆಯಾಗಿ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಮತ್ತು ಹೃದಯ ವಾಹಿನಿ – ಕರ್ನಾಟಕದ ಸ್ಥಾಪಕ ಅಧ್ಯಕ್ಷ ಇಂ.ಕೆ.ಪಿ. ಮಂಜುನಾಥ್ ಸಾಗರ್ ಮಾತನಾಡಿ ವಿಶ್ವದಾದ್ಯಂತ 70 ಕ್ಕೂ ಹೆಚ್ಚು ಕನ್ನಡ ಸಂಘಗಳಿವೆ ಅವುಗಳಲ್ಲಿ 45 ಕನ್ನಡ ಸಂಘಗಳ ಅಧ್ಯಕ್ಷರು ಕರಾವಳಿಯ ಕನ್ನಡಿಗರು ಮಹರಾಷ್ವ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ 40 ಕನ್ನಡ ಸಂಘಗಳಿವೆ ಅವುಗಳಲ್ಲಿ 35 ಕನ್ನಡ ಸಂಘಗಳ ಅಧ್ಯಕ್ಷರು ಕರಾವಳಿಯ ಕನ್ನಡಿಗರು ಇದು ಕರಾವಳಿಯ ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಗೌರವವನ್ನು ತೋರಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾದ ಶ್ರೀ ಪ್ರಾಂಕ್ಲಿನ ಮಥಾಯಸ್ ಉರ್ವಸ್ಟೋರ್ ಕನ್ನಡ ಕಟ್ಟೆ ಮಂಗಳೂರು ಅಧ್ಯಕ್ಷ ಶ್ರೀ -ಅಣ್ಣಾಯ ಕುಲಾಲ್ ಮತ್ತು ಸಾಹಿತಿ ಶ್ರೀ ಚಂದ್ರಶೇಖರ ಬೋಳೂರು ಉಪಸ್ಥಿತರಿದ್ದರು.ಅತಿಥಿಗಳನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ|| ಕೆ.ಮುರಳೀಧರ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀ ಚಂದ್ರಹಾಸ ರೈ, ಧನ್ಯವಾದ ಸಮರ್ಪಿಸಿದರು. ಜನಪದ ಗಾಯಕ ಗೋ.ನಾ. ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.