ನವದೆಹಲಿ: ಸದನದಲ್ಲಿ ಕುಳಿತಿರುವ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಒಬ್ಬರನ್ನೂ ಬಿಡದಂತೆ ಎಲ್ಲರ ವಿರುದ್ಧವೂ ವಾಗ್ ಪ್ರಹಾರ ನಡೆಸುತ್ತಿದೆ. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮಾತ್ರ ಪ್ರತಿಪಕ್ಷಗಳಿಂದ ಶ್ಲಾಘನೆಗಳ ಮಹಾಪೂರ ಹರಿದು ಬರುತ್ತಿದೆ.
ವಿದೇಶದಲ್ಲಿ ಅಪಾಯದಲ್ಲಿರುವ ಭಾರತೀಯರನ್ನು ಸುರಕ್ಷಿತಗೊಳಿಸುವುದರಲ್ಲಿ ತಲ್ಲೀನರಾಗಿರುವ ಸುಷ್ಮಾ ಅವರ ಕಾರ್ಯ ದೇಶದ ಜನತೆ ಮಾತ್ರವಲ್ಲ ಅವರ ರಾಜಕೀಯ ವಿರೋಧಿಗಳೂ ನಿಬ್ಬೆರಗಾಗುವಂತೆ ಮಾಡಿದೆ.
‘ಸುಷ್ಮಾ ಜೀ ಧನ್ಯವಾದ ಹೇಳಲು ಬಯಸುತ್ತೇನೆ, ವಿದೇಶದಲ್ಲಿರುವ ನಮ್ಮವರನ್ನು ಕಾಪಾಡಲು ಅವರು ನಿಜಕ್ಕೂ ಅತ್ಯುತ್ತಮ ಕಾರ್ಯ ಮಾಡುತ್ತಿದ್ದಾರೆ’ ಎಂದು ಲೋಕಸಭೆಯಲ್ಲಿ ಎಎಪಿ ಸದಸ್ಯ ಭಗವಂತ್ ಮಾನ್ ಹೇಳಿದ್ದಾರೆ.
ಎಎಪಿಯ ಧರ್ಮವೀರ್ ಗಾಂಧಿ ಕೂಡ ಸುಷ್ಮಾರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಿಜು ಜನತಾ ದಳ, ರಾಷ್ಟ್ರೀಯ ಜನತಾ ದಳದ ಸದಸ್ಯರು ಕೂಡ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಲೋಕಸಭಾ ಸ್ಪೀಕರ್ ಅವರೂ ಸುಷ್ಮಾ ಕಾರ್ಯವನ್ನು ಶ್ಲಾಘಿಸಿದ್ದು, ಇಲ್ಲಿ ಯಾವುದೇ ಪ್ರಶ್ನೆಗಳಿಲ್ಲ ಬರೀ ಧನ್ಯವಾದಗಳು ಮಾತ್ರ ಎಂದಿದ್ದಾರೆ.
ತನಗೆ ಧನ್ಯವಾದ ಹೇಳಿದ ಎಲ್ಲಿರಗೂ ಕ್ಯ ಮುಗಿದು ನಮಸ್ಕರಿಸುವ ಮೂಲಕ ಸುಷ್ಮಾ ಪ್ರತಿ ಧನ್ಯವಾದ ಅರ್ಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.