ಗುರ್ಗಾಂವ್: ದೆಹಲಿಯ ಧೌಲ ಕೌನ್ನಿಂದ ಗುರ್ಗಾಂವ್ನ ಮಾನೇಸರ್ ನಡುವೆ ಕೇಬಲ್ ಕಾರ್ ಸೌಲಭ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ದೆಹಲಿ-ಹರಿಯಾಣ ಗಡಿಯಲ್ಲಿ ಗುರ್ಗಾಂವ್ನಿಂದ ರಾಜೀವ್ ಚೌಕ್ ಮತ್ತು ಸೋನಾ ರಸ್ತೆ ನಡುವೆ ಈ ಯೋಜನೆಯ ವಿವರದ ವರದಿಯನ್ನು ಈಗಾಗಲೇ ತಯಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿ ನಡೆದ ’ಹರಿಯಾಣ ಜಾಗತಿಕ ಹೂಡಿಕೆದಾರರ ಸಭೆ 2016 ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಹರಿಯಾಣದಲ್ಲಿ 8,000 ಕೋಟಿ ರೂ. ವೆಚ್ಚದಲ್ಲಿ 9 ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
18,000 ಕೋಟಿ ವೆಚ್ಚದಲ್ಲಿ 70 ಕಿ.ಮೀ. ಉದ್ದದ ದೆಹಲಿ-ಜೈಪುರ ಎಕ್ಸ್ಪ್ರೆಸ್ವೇ ಹಾಗೂ 45,000 ಕೋಟಿ ರೂ. ವೆಚ್ಚದ ದೆಹಲಿ-ಅಮೃತಸರ-ಕಾತ್ರಾ ಎಕ್ಸ್ಪ್ರೆಸ್ವೇ ಕೂಡ ಹರಿಯಾಣ ಮೂಲಕ ಸಾಗಲಿದೆ ಎಂದು ಈ ವೇಳೆ ಗಡ್ಕರಿ ಹೇಳಿದ್ದಾರೆ.
ಹರಿಯಾಣದ ಪಳ್ಳಾ ಜಿಲ್ಲೆಯ ಸೋನೆಪತ್ನಿಂದ ದೆಹಲಿಯ ವಾಜಿಯಾಬಾದ್ ನಡುವೆ ಜಲಮಾರ್ಗ ಕೂಡ ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.