ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದವನ್ನು ಸಮರ್ಪಿಸಿ ಭಾಷಣ ಮಾಡಿದರು.
ಸರ್ಕಾರದ ಬಗೆಗೆ ರಾಷ್ಟ್ರಪತಿಗಳ ಮೌಲ್ಯಯುತ ಭಾಷಣಕ್ಕೆ ಧನ್ಯವಾದಗಳು, ಅವರು ತಮ್ಮ ಭಾಷಣದಲ್ಲಿ ಭಾರತದ ಪ್ರಗತಿಯ ಬಗ್ಗೆ ಉಲ್ಲೇಖಿಸಿದ್ದಕ್ಕೆ ಸಂತುಷ್ಟನಾಗಿದ್ದೇನೆ. ಚರ್ಚೆಯಲ್ಲಿ ಭಾಗವಹಿಸಿದ ಎಲ್ಲಾ ಸಂಸದರಿಗೂ ಧನ್ಯವಾದಗಳು ಎಂದು ಮೋದಿ ಮಾತು ಆರಂಭಿಸಿದರು.
ನಾವು ಅವರಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದೇವೆ ಎಂಬುದೇ ಪ್ರತಿಪಕ್ಷಗಳ ದೊಡ್ಡ ಚಿಂತೆ, ನಮ್ಮ ಕಾರ್ಯದ ಬಗ್ಗೆ ಕಾಂಗ್ರೆಸ್ ಚಿಂತಿತವಾಗಿದೆ, ಕೀಳೆರಿಮೆಯಿಂದ ಬಳಲುತ್ತಿದೆ ಎಂದಿದ್ದಾರೆ.
ಎಲ್ಲಾ ಚರ್ಚೆಗಳನ್ನು ನೀವು ಗುಜರಾತಿನತ್ತಲೇ ತಿರುಗಿಸುತ್ತೀರಿ, ಯಾಕೆಂದರೆ ನಿಮ್ಮ ಐಡಿಯಾಗಳು ಖಾಲಿಯಾಗಿವೆ. 14 ವರ್ಷದಿಂದ ಸಾಕಷ್ಟು ಟೀಕೆಗಳನ್ನು ಕೇಳಿದ್ದೇನೆ, ಆದರೆ ಎಲ್ಲಾ ಆರೋಪದಿಂದಲೂ ಮುಕ್ತಗೊಂಡಿದ್ದೇನೆ. ಟೀಕೆಯೊಂದಿಗೆ ಬದುಕುವುದನ್ನು ಕಲಿತಿದ್ದೇನೆ.
ಸಂಸತ್ತು ಕಲಾಪಕ್ಕೆ ಇತ್ತೀಚಿಗೆ ನಡೆಯುತ್ತಿರುವ ಅಡ್ಡಿಗಳಿಂದ ನಾನು ಚಿಂತಿತನಾಗಿದ್ದೇನೆ, ಸಂಸತ್ತು ನಡೆಯದೇ ಹೋದರೆ ಪ್ರತಿಯೊಬ್ಬರಿಗೂ ನಷ್ಟ, ಪ್ರಮುಖ ಕಾಯ್ದೆಗಳು ಅನುಮೋದನೆಗೊಳಿಸುವ ಸಲುವಾಗಿ ಎಲ್ಲಾ ಸದಸ್ಯರು ಸಹಕಾರ ನೀಡಬೇಕೆಂದು ನಾನು ಕೋರುತ್ತೇನೆ. ಚರ್ಚೆಗಳು ನಡೆಯುವ ಸ್ಥಳವೇ ಸಂಸತ್ತು ಆದರೆ ಚರ್ಚೆಗಳಿಗೆ ಕೆಲವೊಂದು ಬೌಂಡರಿಗಳನ್ನು ಹಾಕಿಕೊಳ್ಳಬೇಕು ಎಂದರು.
ಮಾ.8 ಅಂತಾರಾಷ್ಟ್ರೀಯ ಮಹಿಳಾ ದಿನ, ಈ ದಿನ ಸಂಸತ್ತಿನಲ್ಲಿ ಮಹಿಳಾ ಸಂಸದರು ಮಾತ್ರ ಮಾತನಾಡುವಂತಾಗಬೇಕು ಎಂದರು.
1974ರಲ್ಲಿ ಐಪಿ ಕಾಲೇಜಿನಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ನಮ್ಮ ದೇಶವನ್ನು ಎಂದಿಗೂ ನಾವು ವೀಕ್ ಎಂದು ತೋರಿಸಿಕೊಳ್ಳಬಾದರು ಎಂದು ಹೇಳಿದ್ದರು ಎಂಬುದನ್ನು ಮೋದಿ ಕಾಂಗ್ರೆಸ್ಸಿಗರಿಗೆ ನೆನಪಿಸಿದರು.
ಸರ್ಕಾರದ ಯೋಜನೆಗಳ ಬಗ್ಗೆ ಲೇವಡಿ ಮಾಡುವ ಬದಲು, ಪ್ರತಿಪಕ್ಷಗಳು ಸಲಹೆಗಳನ್ನು ನಿಡಬೇಕು, 60 ವರ್ಷಗಳ ನಿಮ್ಮ ಆಡಳಿತದ ಫಲವಾಗಿ ಇಂದು ನಮ್ಮ ಸರ್ಕಾರ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.