ನವದೆಹಲಿ: ಅಲ್ಖೈದಾ ಉಗ್ರ ಸಂಘಟನೆ ಭಾರತೀಯ ರೈಲ್ವೇ ವೆಬ್ಸೈಟ್ನ್ನು ಹ್ಯಾಕ್ ಮಾಡಿ ಅದರಲ್ಲಿ ಭಾರತೀಯ ಮುಸ್ಲಿಮರಿಗೆ ಸಂದೇಶವನ್ನು ನೀಡಿದೆ.
ಸೆಂಟ್ರಲ್ ರೈಲ್ವೇಯ ಭೂಸವಾಲ್ ಡಿವಿಶನ್ನ ಪರ್ಸನಲ್ ಡಿಪಾರ್ಟ್ಮೆಂಟ್ನ ಆಡಳಿತಾತ್ಮಕ ಉಪಯೋಗಕ್ಕಾಗಿ ರಚಿಸಲಾದ ವೆಬ್ಸೈಟ್ನ್ನು ಅಲ್ಖೈದಾ ಉಗ್ರರು ಹ್ಯಾಕ್ ಮಾಡಿದ್ದಾರೆ. ಇದರಲ್ಲಿ ಅದರ ಮುಖ್ಯಸ್ಥ ಮೌಲಾನಾ ಆಸೀಮ್ ಉಮರ್ ಭಾರತೀಯ ಮುಸ್ಲಿಮರಿಗೆ ಸಂದೇಶ ರವಾನಿಸಿದ್ದಾನೆ.
’ನಿಮ್ಮ ಸಮುದ್ರದಲ್ಲಿ ಯಾಕೆ ಬಿರುಗಾಳಿಯಿಲ್ಲ? ಭಾರತೀಯ ಮುಸ್ಲಿಮರಿಗೆ ಮೌಲಾನಾ ಆಸೀಮ್ ಉಮರ್ನ ಸಂದೇಶ’ ಎಂದು ಬರೆದು, 11 ಪುಟಗಳ ದಾಖಲೆಯನ್ನು ಪೋಸ್ಟ್ ಮಾಡಿದೆ.
’ಭಾರತೀಯ ಮುಸ್ಲಿಮರು ಮರೆತಿರುವ ಜಿಹಾದಿ ಪಾಠವನ್ನು ಮತ್ತೊಮ್ಮೆ ಅವರಿಗೆ ನೆನಪಿಸಲು, ಜಿಹಾದಿ ಯುದ್ಧ ನಡೆಸಲು ಅವರಿಗೆ ಪ್ರೇರಣೆ ನಿಡಲು ದೆಹಲಿ ಶಾ ಮುಹದಿತ್ ದೆಲ್ಹ್ವಿಗೆ ಮತ್ತೆ ಜನ್ಮ ನೀಡುವುದೇ? ಎಂದು ಇದರಲ್ಲಿ ಬರೆಯಲಾಗಿದೆ.
ಉಮರ್ ಉತ್ತರಪ್ರದೇಶದ ಸಂಭಾಲ್ ನಿವಾಸಿಯಾಗಿದ್ದು, ಇತನನ್ನು ಭಾರತದ ಸಬ್ ಕಾಂಟಿನೆಂಟ್ನ ಅಲ್ಖೈದಾ ಮುಖ್ಯಸ್ಥನನ್ನಾಗಿ ನೇಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.