ನವದೆಹಲಿ: ಪಾನ್ ಮಸಾಲವನ್ನು ಜಾಹೀರಾತಿನ ಮೂಲಕ ಪ್ರಚಾರ ಪಡಿಸುತ್ತಿರುವ ಬಾಲಿವುಡ್ನ ನಾಲ್ವರು ನಟರ ಪತ್ನಿಯರಿಗೆ ಪತ್ರ ಬರೆದಿರುವ ದೆಹಲಿಯ ಎಎಪಿ ಸರ್ಕಾರ, ಪಾನ್ ಮಸಾಲಗೆ ಉತ್ತೇಜನ ಕೊಡದಂತೆ ಪತಿಯಂದಿರನ್ನು ತಡೆಯಿರಿ ಎಂದು ಹೇಳಿದೆ.
ಅಜಯ್ ದೇವಗನ್, ಶಾರುಖ್ ಖಾನ್, ಅರ್ಬಾಝ್ ಖಾನ್ ಮತ್ತು ಗೋವಿಂದರ ಪತ್ನಿಯರಿಗೆ ಪತ್ರ ಬರೆಯಲಾಗಿದೆ.
ಈ ನಟರಿಗೆ ತಂಬಾಕು ಪದಾರ್ಥಗಳ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ಈ ಹಿಂದೆ ದೆಹಲಿಯ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿತ್ತು, ಆದರೆ ಇವರು ಈ ವಿನಂತಿಯನ್ನು ನಿರ್ಲಕ್ಷ್ಯಿಸಿದ್ದರು. ಹೀಗಾಗಿ ಅವರ ಪತ್ನಿಯಂದಿರಿಗೆ ಪತ್ರ ಬರೆದಿದೆ.
’ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಶಾರುಖ್ ಖಾನ್ ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ಪಾಲ್ಗೊಳ್ಳದೇ ಇರುವಂತೆ ಪ್ರೊತ್ಸಾಹಿಸಲು ನಾವು ನಿಮ್ಮಲ್ಲಿ ವಿನಂಬ್ರ ಮನವಿಯನ್ನು ಮಾಡಿಕೊಳ್ಳುತ್ತೇವೆ’ ಎಂದು ಗೌರಿ ಖಾನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಪಾನ್ ಮಸಾಲದಲ್ಲಿ ತಂಬಾಕು ಅಥವಾ ನಿಕೋಟಿನ್ ಇಲ್ಲದಿದ್ದರೂ ಅದರಲ್ಲಿ ಸುಪಾರಿಯಿದೆ. ಇದು ಕ್ಯಾನ್ಸರ್ ಉಂಟು ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.