ನವದೆಹಲಿ: ಮಾಜಿ ಗೃಹ ಕಾರ್ಯದರ್ಶಿ ಜಿಕೆ ಪಿಳೈ ಬಳಿಕ ಇದೀಗ ಆಂತರಿಕ ಭದ್ರತೆಯ ಮಾಜಿ ಕಾರ್ಯದರ್ಶಿ ಆರ್ವಿಎಸ್ ಮಣಿ ಅವರು ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಇಶ್ರತ್ ಪ್ರಕರಣದಲ್ಲಿ ಸಲ್ಲಿಸಲಾದ ಎರಡನೇ ಅಫಿಡವಿಟ್ನ್ನು ನಾನು ಡ್ರಾಫ್ಟ್ ಮಾಡಿಲ್ಲ, ನನಗೆ ಸಹಿ ಹಾಕುವಂತೆ ಆದೇಶ ನೀಡಿದ್ದು ಸರ್ಕಾರ ಎಂದಿದ್ದಾರೆ.
ಸರ್ಕಾರದ ಆದೇಶದಂತೆ ನಡೆದುಕೊಳ್ಳಬೇಕಾದುದು ನನ್ನ ಕರ್ತವ್ಯವಾಗಿತ್ತು, ಅದನ್ನು ನಿರಾಕರಿಸುವಂತಿರಲಿಲ್ಲ, ಅಫಿಡವಿಟ್ನ ಅಗತ್ಯತೆ ಏನೆಂದು ಕೇಳುವಂತಿರಲಿಲ್ಲ ಎಂದಿದ್ದಾರೆ.
ಗುಪ್ತಚರ ಇಲಾಖೆಗಳ ಮಾಹಿತಿಯನ್ನು ನಾನು ನಂಬುತ್ತೇನೆ, ಅದನ್ನು ನಂಬದಿರಲು ಕಾರಣಗಳೇ ಇಲ್ಲ. ಐಬಿ ವರದಿಯನ್ನು ನಾವು ನಂಬುದಿಲ್ಲ ಎಂದು ಸಿಬಿಐ ಹೇಳಿತ್ತು, ಆದರೆ ಸಿಬಿಐ ಹೇಳಿಕೆಯನ್ನು ನಾನು ನಂಬುದಿಲ್ಲ ಎಂದಿದ್ದಾರೆ.
ಇದೇ ವೇಳೆ ಅವರು, ಎಸ್ಐಟಿ ಮುಖ್ಯಸ್ಥರು ಸಾಕ್ಷಿಗಳನ್ನು ತಿರಿಚುತ್ತಿದ್ದರು. ಹಲವು ಅಧಿಕಾರಿಗಳು, ಜನರು ನನ್ನನ್ನು ಹಿಂಬಾಲಿಸುತ್ತಿದ್ದರು. ೨೦೧೩ರಲ್ಲಿ ನನಗೆ ಸಿಗರೇಟಿನಿಂದಲೂ ಸುಟ್ಟರು ಎಂದಿದ್ದಾರೆ.
ಮಣಿ ಅವರ ಹೇಳಿಕೆ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಮತ್ತೊಂದು ಸುತ್ತಿನ ಜಟಾಪಟಿಯನ್ನು ಸೃಷ್ಟಿಸಿದೆ. ಪಿ.ಚಿದಂಬರಂ ಅಧಿಕಾರವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.