ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸಂಸದ ಆದರ್ಶ ಗ್ರಾಮ ಯೋಜನೆಯ ಅನ್ವಯ ದತ್ತು ಪಡೆದುಕೊಂಡ ವಾರಣಾಸಿಯ ಜಯಪುರ್ ಗ್ರಾಮದ ಜನರು ಚರಕ ಮತ್ತು ಮಗ್ಗವನ್ನು ಸರ್ಕಾರದ ವತಿಯಿಂದ ಪಡೆದುಕೊಂಡಿದ್ದಾರೆ.
ಖಾದಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಇದನ್ನು ನೀಡಲಾಗಿದೆ. ಇಲ್ಲಿನ 35 ಮಹಿಳೆಯರು ಈಗಾಗಲೇ ತರಬೇತಿಯನ್ನು ಪಡೆದುಕೊಂಡಿದ್ದು, ಸ್ವ ಉದ್ಯೋಗಕ್ಕಾಗಿ ಅವರಿಗೆ ಚರಕ, ಮಗ್ಗವನ್ನು ನಿಡಲಾಗಿದೆ.
ಇದೊಂದು ಪರೀಕ್ಷಾರ್ಥ ಪ್ರಯೋಗವಾಗಿದ್ದು, ಇದು ಯಶಸ್ವಿಗೊಂಡರೆ 200 ಚರಕಗಳ ಮತ್ತು 5೦ ಮಗ್ಗಗಳ ಘಟಕಗಳನ್ನು ಸ್ಥಾಪಿಸುತ್ತೇವೆ. ಇದರಿಂದ 250 ಮಹಿಳೆಯರು ನೇರ ಮತ್ತು 50 ಮಹಿಳೆಯರು ಅರೆಕಾಲಿಕ ಉದ್ಯೋಗ ಪಡೆಯುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.