ನವದೆಹಲಿ: ’ಕೆಲವರಿಗೆ ಮೀಸಲಾತಿ ಬೇಕು, ಕೆಲವರಿಗೆ ಆಜಾದಿ ಬೇಕು ಆದರೆ ನನಗೆ ಏನೂ ಬೇಡ, ಕೇವಲ ನನಗೆ ನನ್ನ ಹೊದಿಕೆ ಸಾಕು’ ಹೀಗೆಂದು ಪೇಸ್ಬುಕ್ನಲ್ಲಿ ಪೋಸ್ಟ್ನಲ್ಲಿ ಹಾಕಿದವರು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ಪವಣ್ ಕುಮಾರ್.
ಪವನ್ ಕುಮಾರ್ ದೇಶದ್ರೋಹದ ವಿವಾದದಲ್ಲಿ ಮುಳುಗಿರುವ ಜವಾಹರ್ ಲಾಲ್ ವಿಶ್ವವಿದ್ಯಾಲಯದ ಪದವೀಧರ, ಅಷ್ಟೇ ಅಲ್ಲ ಮೀಸಲಾತಿ ಹೋರಾಟ ನಡೆಯುತ್ತಿರುವ ಹರಿಯಾಣದ ಜಾಟ್ ಸಮುದಾಯದವರು. ಆ ಕಾರಣಕ್ಕಾಗಿಯೇ ಅವರು ಫೇಸ್ಬುಕ್ನಲ್ಲಿ ನನಗೇನೂ ಬೇಡ ಎಂದು ಹೇಳಿಕೊಂಡಿದ್ದಾರೆ.
ಒಂದೆಡೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾಶ್ಮೀರದ ಆಜಾದಿಗಾಗಿ ಘೋಷಣೆ ಕೂಗುತ್ತಿದ್ದಾರೆ, ಇನ್ನೊಂದೆಡೆ ಹರಿಯಾಣದಲ್ಲಿ ಜಾಟ್ ಸಮುದಾಯದವರು ಮೀಸಲಾತಿಗಾಗಿ ರಾಜ್ಯವನ್ನೇ ರಣಾಂಗಣವಾಗಿ ಪರಿವರ್ತಿಸಿದ್ದಾರೆ. ಆದರೆ ದೇಶದ ಬಗ್ಗೆ ನಿಜವಾದ ಕಾಳಜಿ, ಪ್ರೀತಿ ಹೊತ್ತು ದೇಶಕ್ಕಾಗಿ ಮಡಿದ ವೀರ ಯೋಧ ಏನು ಹೇಳುತ್ತಾನೆ ಎಂಬುದು ಕ್ಯಾಪ್ಟನ್ ಪವನ್ ಕುಮಾರ್ ಮಾತುಗಳಿಂದ ತಿಳಿದು ಬರುತ್ತದೆ.
23 ವರ್ಷದ ಪವನ್ ಸೇನೆಗೆ ಸೇರಿ 3 ವರ್ಷ ಮಾತ್ರ ಆಗಿದೆ. ಭಯೋತ್ಪಾದನಾ ಕಾರ್ಯಾಚರಣೆಯಲ್ಲಿ ಈ ಹಿಂದೆಯೂ ಅವರು ಗಾಯಗೊಂಡಿದ್ದರು. ಆದರೆ ಅಂಜದೆ ಸ್ವಯಂ ಪ್ರೇರಣೆಯಿಂದಲೇ ಉಗ್ರರ ವಿರುದ್ಧ ಪದೇ ಪದೇ ಹೋರಾಡುತ್ತಿದ್ದರು. ನಿನ್ನೆ ನಡೆದ ಗುಂಡಿನ ಚಕಮಕಿಯಲ್ಲಿ ಅವರು ಪ್ರಾಣತ್ಯಾಗ ಮಾಡಿದ್ದಾರೆ.
ಅವರಿಗೆ ಮೀಸಲಾತಿಯೂ ಬೇಡ, ಕೆಟ್ಟ ರಾಜಕಾರಣವೂ ಬೇಡ. ಅವರಿಗೆ ಬೇಕಿರುವುದು ದೇಶ ಮತ್ತು ದೇಶದ ಹಿತಾಸಕ್ತಿ. ಅದರ ರಕ್ಷಣೆಯೇ ತನ್ನ ಜೀವನದ ಏಕೈಕ ಉದ್ದೇಶ ಎಂದು ಅಂದುಕೊಂಡಿದ್ದ ಧೀರ ಯೋಧ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.