ನವದೆಹಲಿ: ವಿಮಾನದಲ್ಲಿ ಪ್ರಯಾಣಿಕರನ್ನು ಗಗನಸಖಿಯರು ಸ್ವಾಗತಿಸಿದಂತೆ ರೈಲಿನಲ್ಲೂ ಪ್ರಯಾಣಿಕರನ್ನು ಪರಿಚಾರಕಿಯರು ಸ್ವಾಗತಿಸಲಿದ್ದಾರೆ.
ಮುಂದಿನ ತಿಂಗಳು ದೆಹಲಿ-ಆಗ್ರಾ ನಡುವೆ ಸಂಚರಿಸುವ ಗತಿಮಾನ್ ಎಕ್ಸ್ಪ್ರೆಸ್ ರೈಲು ಕಾರ್ಯಾರಂಭಗೊಳ್ಳಲಿದೆ. ಭಾರತದ ಅತಿವೇಗದ ರೈಲು ಇದಾಗಲಿದ್ದು, ಪರಿಚಾರಕಿಯರಿಂದ ಸ್ವಾಗತಿಸಲ್ಪಡುವ ಈ ಹೊಸ ವ್ಯವಸ್ಥೆಯನ್ನು ರೈಲ್ವೆ ಸಚಿವಾಲಯ ಪರಿಚಯಿಸಲಿದೆ.
160 ಕಿ.ಮೀ. ವೇಗದಲ್ಲಿ ಸಂಚರಿಸುವ ಈ ರೈಲು 200 ಕಿ.ಮೀ. ದೂರವನ್ನು ಕೇವಲ 105 ನಿಮಿಷಗಳಲ್ಲಿ ತಲುಪಲಿದೆ. ಈ ಬಾರಿಯ ಬಜೆಟ್ನಲ್ಲಿ ಈ ರೈಲಿನ ಸೌಲಭ್ಯಗಳ ಬಗ್ಗೆ ರೈಲ್ವೆ ಸಚಿವ ಸುರೇಶ್ ಪ್ರಭು ಘೋಷಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.