ಭೋಪಾಲ್: ಮಹತ್ವಾಕಾಂಕ್ಷೆಯ ಯೋಜನೆ ’ಡಿಜಿಟಲ್ ಇಂಡಿಯಾ’ದ ಅನುಕೂಲಗಳನ್ನು ಈ ದೇಶದ ರೈತ ಬಂಧುಗಳಿಗೂ ತಲುಪಿಸಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ.
ದೇಶದ 550 ರೈತ ಮಾರುಕಟ್ಟೆಗಳನ್ನು ತಂತ್ರಜ್ಞಾನದ ಸಹಾಯದಿಂದ ಪರಸ್ಪರ ಸಂಪರ್ಕಿಸುವ ಇರಾದೆ ಮೋದಿಯದ್ದು. ಮಧ್ಯಪ್ರದೇಶದಲ್ಲಿ ಗುರುವಾರ ’ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನಾ’ಗೆ ಚಾಲನೆ ನೀಡಿದ ಸಂದರ್ಭ ಅವರು ತಮ್ಮ ಈ ಯೋಚನೆಯನ್ನು ರೈತರ ಮುಂದಿಟ್ಟಿದ್ದಾರೆ.
ರೈತರು ತಮ್ಮ ಉತ್ಪನ್ನಗಳನ್ನು ಅತ್ಯಧಿಕ ಬೆಲೆಗೆ ಮಾರಲು ರಾಷ್ಟ್ರೀಯ ಕೃಷಿ ಮಾರುಕಟ್ಟೆ ಪ್ರಯೋಜಕಾರಿಯಾಗಲಿದೆ. ದೇಶದ ವಿವಿಧ ಮಾರುಕಟ್ಟೆಯಲ್ಲಿ ವಿವಿಧ ದರಗಳಿರುತ್ತದೆ. ಆದರೆ ರೈತರು ಅನಿವಾರ್ಯವಾಗಿ ತಮ್ಮ ಸಮೀಪದ ಮಾರುಕಟ್ಟೆಗೆ ಸಿಕ್ಕ ದರದಲ್ಲಿ ಬೆಲೆಗಳನ್ನು ಮಾರಾಟ ಮಾಡಬೇಕಾಗುತ್ತದೆ. ಇದರಿಂದ ರೈತನಿಗೆ ನಷ್ಟವುಂಟಾಗುತ್ತದೆ. ಆದರೆ ಮಾರುಕಟ್ಟೆಗಳನ್ನು ಪರಸ್ಪರ ಕನೆಕ್ಟ್ ಮಾಡಿ ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ವರ್ಚುವಲ್ ಫ್ಲ್ಯಾಟ್ಫಾರ್ಮ್ ಸೃಷ್ಟಿಸಿದರೆ ಈ ಸಮಸ್ಯೆಗೆ ಕಡಿವಾಣ ಹಾಕಬಹುದು.
ಡಿಜಿಟಲ್ ಇಂಡಿಯಾ ಯೋಜನೆಯಿಂದ ಮಾರುಕಟ್ಟೆಗಳನ್ನು ಕನೆಕ್ಟ್ ಮಾಡುವುದರಿಂದ ರೈತರಿಗೆ ವಿವಿಧ ಮಾರುಕಟ್ಟೆಗಳಲ್ಲಿನ ದರಗಳನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಈ ಬಗೆಗಿನ ಮಾಹಿತಿಯನ್ನು ಅವರು ತಮ್ಮ ಮೊಬೈಲ್ ಫೋನ್ನಲ್ಲೇ ಪಡೆದುಕೊಂಡು ತಮ್ಮ ಬೆಲೆಗಳನ್ನು ಉತ್ತಮ ದರಗಳಿಗೆ ಮಾರಾಟ ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.